News Karnataka Kannada
Sunday, April 28 2024
ಮಂಗಳೂರು

ಸುಳ್ಯ: ಕಾರಿನ ಬಂಪರ್ ಒಳಗೆ ಸಿಲುಕಿ ನಾಪತ್ತೆಯಾಗಿದ್ದ ಶ್ವಾನ ಕೊನೆಗೂ ಪತ್ತೆ

Sullia: A dog that went missing after being trapped inside a car bumper has finally been found.
Photo Credit : News Kannada

ಸುಳ್ಯ (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಕಾರಿನ ಬಂಪರ್ ಒಳಗೆ ಸಿಲುಕಿ 70 ಕಿಲೋಮೀಟರ್ ಸಾಗಿ ಬದುಕಿ ಬಂದ ಶ್ವಾನವೊಂದರ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ತನ್ನ ಮರಿಗಳಿಂದ ಬೇರ್ಪಟ್ಟ ಆ ಶ್ವಾನವನ್ನು ಮತ್ತೆ ಮರಿಗಳೊಂದಿಗೆ ಸೇರಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಜನ ಆಗ್ರಹಿಸಿದ್ದರು. ಆದರೆ ಈ ಶ್ವಾನವೊಂದರ ಹಿಂದೆ ಇನ್ನೊಂದು ಅವಿನಾಭಾವ ಸಂಬಂಧದ ಕಥೆಯೂ ಇದೆ.

ಸುಳ್ಯ ಸಮೀಪದ ಬಳ್ಪ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ರೈಯವರ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಕ್ವಾರ್ಟರ್ಸ್ ಗೆ ಈ ಶ್ವಾನ ದಿನವೂ ಬರುತ್ತಿತ್ತು. ಅದಕ್ಕೆ ಸಂತೋಷ್ ರೈ ಮತ್ತವರ ಮಗಳು ಸಾನ್ವಿ ಪ್ರತಿದಿನ ಆಹಾರ ಹಾಕುತ್ತಿದ್ದರು. ಇತ್ತ ಅಫಘಾತವಾಗಿ ಪುತ್ತೂರು ಸೇರಿದ ಶ್ವಾನವನ್ನು ತಂದು ಮರಿಗಳೊಂದಿಗೆ ಸೇರಿಸುವಂತೆ ತಂದೆ ಸಂತೋಷ್ ಅವರಲ್ಲಿ ಮಗಳು ಸಾನ್ವಿ ಪಟ್ಟು ಹಿಡಿದಿದ್ದಳು. ಮಗಳ ಹಠಕ್ಕೆ ಕಟ್ಟು ಬಿದ್ದು ಶ್ವಾನಕ್ಕಾಗಿ ಪುತ್ತೂರಿನ ತಮ್ಮ ಪರಿಚಯದವರೊಂದಿಗೆ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಶ್ವಾನ ಪುತ್ತೂರಿನ ಮನೆಯೊಂದರ ಬಳಿ ಇರುವ ಬಗ್ಗೆ ಮಾಹಿತಿ ಪಡೆದರು. ತಕ್ಷಣವೇ ಪುತ್ತೂರಿಗೆ ತೆರಳಿದ ಸಂತೋಷ್ ರೈ ಗೆ ಶ್ವಾನ ಸಿಗದ ಕಾರಣ ಪುತ್ತೂರಿನ ನಗರದಾದ್ಯಂತ ಶ್ವಾನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಹುಡುಕಾಟದ ಬಳಿಕ ಕೊನೆಗೂ ಶ್ವಾನ ಪತ್ತೆಯಾಗಿದೆ. ಶ್ವಾನವನ್ನು ಕಾರಿನಲ್ಲಿ ಕೊಂಡೊಯ್ದ ಅವರು ಮರಿಗಳ ಜೊತೆ ಸೇರಿಸಿದ್ದಾರೆ. ಶ್ವಾನ ಮತ್ತು ಮರಿಗಳನ್ನು ಸೇರಿದ್ದಕ್ಕೆ ಸಾನ್ವಿ ತುಂಬಾ ಖುಶಿ ಆಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು