ಸುಳ್ಯ: ಮನೆಯಲ್ಲಿ ಹಟ್ಟಿಗಳಿದ್ದರೂ ಹಸುಗಳನ್ನು ಸಾಕಲು ಕಷ್ಟವಾಗು ಈ ಕಾಲದಲ್ಲಿ ಬೇರೆಯವರ ಹಸುಗಳನ್ನು ತಮ್ಮದೇ ಶಾಲೆಯಲ್ಲಿ ತಂದು ಅದನ್ನು ನೋಡಿಕೊಳ್ಳುವುದು ಒಂದು ಸಾಹಸವೇ ಸರಿ. ಅಂತಹದ್ರಲ್ಲಿ ಸುಳ್ಯದ ಸ್ನೇಹ ಶಾಲೆಯಲ್ಲಿ ಚಂದ್ರಶೇಖರ ದಾಂಬ್ಲೆಯವರು ಹಸುಗಳನ್ನು ಸಾಕುವ ಮೂಲಕ ಈ ಸಾಹಸಕ್ಕೆ ಕೈ ಹಾಕಿದ್ದಾರೆ.
ಎರಡು ವರ್ಷಗಳ ಹಿಂದೆ ಸುಳ್ಯದ ಪಯಶ್ವಿನಿ ನದಿಯಲ್ಲಿ ನೆರೆ ಉಂಟಾಗಿದ್ದಾಗ ನದಿ ತಟದಲ್ಲಿದ್ದ ಹಲವು ಮನೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದ್ದವು. ಅಂತಹ ಒಂದು ಮನೆಯ ಮಕ್ಕಳು ಅವರು ಸ್ನೇಹ ಶಾಲೆಗೆ ಬರುತ್ತಿದ್ದರು. ದಾಂಬ್ಲೆ ಅವರು ಅಲ್ಲಿನ ಪರಿಸ್ಥಿತಿಯ ಬಗ್ಗೆ ಅನುಮಾನ ಬಂದು ಆ ಮಕ್ಕಳ ಮನೆಗೆ ಭೇಟಿ ನೀಡಿ ಆ ಮಕ್ಕಳಿಗೆ ನೆರೆ ಇಳಿಯುವವರೆಗೂ ಅವರ ಖಾಲಿ ಇರುವ ಮನೆಗೆ ಬಂದು ತಂಗಲು ಸಲಹೆ ನೀಡಿದ್ದರು. ಆದರೆ ಅವರಿಗೆ ಪಕ್ಕದ ಮನೆಯವರೇ ಆಶ್ರಯ ನೀಡಿದ್ದರು.
ಇದೀಗ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಜೊತೆಗೆ ಭೂಕಂಪವೂ ಸಂಭವಿಸಿದ್ದರಿಂದ ಅವರಿಗೆ ಆ ಮನೆಯಲ್ಲಿರಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ದಾಂಬ್ಲೆಯವರು ಮತ್ತೆ ತಮ್ಮ ಖಾಲಿ ಇರುವ ಮನೆಗೆ ಆ ಕುಟುಂಬವನ್ನು ಆಹ್ವಾನಿಸಿದ್ದರು. ಅವರು ಬರುವುದಾಗಿ ಒಪ್ಪಿಕೊಂಡಿದ್ದರೂ ಸಹ. ಆದರೆ ಎರಡು ದಿನವಾದರು ಬರದ ಕಾರಣ ಫೋನ್ ಮಾಡಿದಾಗ ಅವರ ಜೊತೆಗೆ ತಾವು ಸಾಕಿದ ಏಳು ದನಗಳನ್ನು ಬಿಟ್ಟು ಬರುವುದು ಅವರಿಗೆ ಬಹಳ ಕಷ್ಟವಾಗಿತ್ತು. ಯಾವ ಆಶ್ರಮದಲ್ಲೂ ಈ ದನಗಳಿಗೆ ಸ್ಥಳವಿರಲಿಲ್ಲ ಆ ಕುಟುಂಬದವರಿಗೆ ದನಗಳನ್ನು ಮಾರದೆ ಬೇರೆ ವಿಧಿ ಇರಲಿಲ್ಲ. ಇದಕ್ಕೆ ಮನೆಯವರ ಮಸ್ಸು ಒಪ್ಪುತ್ತಿಲ್ಲ.
ತಾವು ಸಾಕಿದ ಜಾನುವಾರುಗಳನ್ನು ಬಿಟ್ಟು ಬರುವುದು ಎಷ್ಟು ಕಷ್ಟ ಎಂದು ಬಹುಶಹ ದಾಂಬ್ಲೆ ಅವರಿಗೂ ಚನ್ನಾಗಿ ತಿಳಿದಿತ್ತು. ಅದಕ್ಕಾಗಿ ತಮ್ಮ ಶಾಲೆಯಲ್ಲಿಯೇ ಖಾಲಿ ಇದ್ದ ಮಂಟಪ(ಪೆವಿಲಿಯನ್ )ದಲ್ಲಿ 2ದನ, 4ಕರುಗಳು ಹಾಗೂ 1ದೊಡ್ಡ ಕರುವಿಗೆ ಜಾಗ ನೀಡಿದ್ದಾರೆ.
ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಚಂದ್ರಶೇಖರ ದಾಂಬ್ಲೆ ‘ ಈಗಿನ ಮಕ್ಕಳಿಗೆ ಹಸು ದನಗಳ ಬಗ್ಗೆ ಅಷ್ಟಾಗಿ ಯಾವುದೇ ಮಾಹಿತಿ ಇಲ್ಲ ಅವುಗಳ ಸಾಕಣೆ ಹೇಗೆ ಎನ್ನುವುದು ತಿಳಿದಿಲ್ಲ ಇದರ ಮೂಲಕವಾದರೂ ಮಕ್ಕಳು ಕಲಿಯಲಿ ಎನ್ನುವುದು ನನ್ನ ಉದ್ದೇಶ’ ಎಂದರು.
ಇವರ ಸ್ನೇಹ ಶಾಲೆಯೂ ಕೂಡ ಪರಿಸರದ ಮಧ್ಯೆ ಇದ್ದು ಮಕ್ಕಳನ್ನು ಪರಿಸರದ ಜೊತೆ ಬೆಳೆಸುವುದು ಈ ಶಾಲೆಯ ಉದ್ದೇಶ ಎಂದರೂ ತಪ್ಪಾಗಲಾರದು.