ಸುರತ್ಕಲ್: ಶಾಲೆಯಿಂದ ಬಂದ ವಿದ್ಯಾರ್ಥಿ, ಸ್ಕೂಲ್ ಬಸ್ಸಿನಡಿಗೆ ಬಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳೂರು ಸಮೀಪದ ಸುರತ್ಕಲ್ ನಲ್ಲಿ ನಡೆದಿದೆ.
ಸುರತ್ಕಲ್ ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಾಲೆಯ ಬಸ್ಸಿನಲ್ಲಿ ಬಂದು ಮನೆ ಸಮೀಪ ಇಳಿದಿದ್ದಾನೆ. ಆದರೆ ಬಸ್ ಚಲಿಸುವ ಮುನ್ನವೇ ಬಸ್ ಮುಂಭಾಗದಲ್ಲಿ ವಿದ್ಯಾರ್ಥಿ ರಸ್ತೆ ದಾಟಿದಾಗ, ವಿದ್ಯಾರ್ಥಿಯನ್ನ ಗಮನಿಸದ ಚಾಲಕ, ವಿದ್ಯಾರ್ಥಿ ಮೇಲೆಯೇ ಬಸ್ ಹರಿಸಿದ್ದಾನೆ. ಈ ವೇಳೆ ಇನ್ನೊಂದು ವಿದ್ಯಾರ್ಥಿ ಹಾಗು ಮಹಿಳೆಯರ ಕಿರುಚಾಟ ಕಂಡು ಚಾಲಕ ಬಸ್ಸು ನಿಲ್ಲಿಸಿದ್ದು, ಮಿನಿ ಬಸ್ ನ ಮಧ್ಯ ಭಾಗದ ಪಾಸದ ವಿದ್ಯಾರ್ಥಿ ಬಾರಿ ಅಪಾಯದಿಂದ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.
ಇದೀಗ ಚಾಲಕನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.