ಮಂಗಳೂರು: ಇಸ್ರೇಲ್ ನಲ್ಲಿ ಶಾಂತಿ ನೆಲೆಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ದೇವಳವೊಂದರಲ್ಲಿ ವಿಶೇಷ ಪೂಜೆ ನಡೆದಿದೆ. ಇಸ್ರೇಲ್ ನಲ್ಲಿರುವ ಭಾರತೀಯರು ಸುರಕ್ಷತೆ ಮತ್ತು ಶಾಂತಿಗಾಗಿ ಬೆಳ್ತಂಗಡಿ ತಾಲೂಕಿನ ಮರೋಡಿ ಶ್ರೀ ಉಮಾಮಹೇಶ್ವರ ದೇವಳದಲ್ಲಿ ಗ್ರಾಮಸ್ಥರಿಂದ ವಿಶೇಷ ಪೂಜೆ ನಡೆಯಿತು.
ಮರೋಡಿ ನಾರಾಯಣ ಪೂಜಾರಿ ಕುಟುಂಬಸ್ಥರಿಂದ ಶ್ರೀ ಉಮಾಮಹೇಶ್ವರ ದೇವರಿಗೆ ವಿಶೇಷ ರಂಗಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ ಇಸ್ರೇಲ್ ನಲ್ಲಿರುವ ಉದ್ಯೋಗಿಗಳು ಊರಿಗೆ ಕ್ಷೇಮವಾಗಿ ಊರಿಗೆ ಬರಲೆಂದು ಗ್ರಾಮಸ್ಥರಿಂದ ಸಾಮೂಹಿಕ ಪ್ರಾರ್ಥನೆ ಕೂಡ ಜರುಗಿತು.
ಇಸ್ರೇಲ್ ನಲ್ಲಿ ಮರೋಡಿ ಗ್ರಾಮದ ಹಲವು ಮಂದಿ ಉದ್ಯೋಗ ಮಾಡುತ್ತಿದ್ದು, ಇಸ್ರೇಲ್ ನಲ್ಲಿದ್ದುಕೊಂಡು ನಮ್ಮ ಊರಿನ ಅಭಿವೃದ್ಧಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ ಯುದ್ಧ ನಿಂತರೆ ಎಲ್ಲ ದೇಶಗಳಿಗೂ ಓಳಿತಾಗುತ್ತದೆ. ಅದೇ ರೀತಿ ನಾನೂ ಕೂಡ ಇಸ್ರೇಲ್ ನಲ್ಲಿ ದುಡಿಮೆ ಮಾಡಿದ್ದು, ಆ ದೇಶದ ಮೇಲೆ ಅಭಿಮಾನವಿದೆ. ಈ ಕಾರಣಕ್ಕೆ ಎಲ್ಲರಿಗೂ ಒಳಿತಾಗಲಿ ಎಂದು ಪೂಜೆ, ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಮರೋಡಿ ನಿವಾಸಿ ನಾರಾಯಣ ಪೂಜಾರಿ ಉಚ್ಚೂರು ಹೇಳಿದ್ದಾರೆ.