News Karnataka Kannada
Friday, May 17 2024
ಮಂಗಳೂರು

ಇಸ್ರೇಲ್‌ ನಲ್ಲಿ ಯದ್ಧ ನಿಲ್ಲಲೆಂದು ಬೆಳ್ತಂಗಡಿ ದೇವಳದಲ್ಲಿ ವಿಶೇಷ ಪೂಜೆ

Special puja at Belthangady temple to stop war in Israel
Photo Credit : News Kannada

ಮಂಗಳೂರು: ಇಸ್ರೇಲ್‌ ನಲ್ಲಿ ಶಾಂತಿ ನೆಲೆಸುವಂತೆ ದಕ್ಷಿಣ ಕನ್ನಡ ಜಿಲ್ಲೆಯ ದೇವಳವೊಂದರಲ್ಲಿ ವಿಶೇಷ ಪೂಜೆ ನಡೆದಿದೆ. ಇಸ್ರೇಲ್‌ ನಲ್ಲಿರುವ ಭಾರತೀಯರು ಸುರಕ್ಷತೆ ಮತ್ತು ಶಾಂತಿಗಾಗಿ ಬೆಳ್ತಂಗಡಿ ತಾಲೂಕಿನ ಮರೋಡಿ ಶ್ರೀ ಉಮಾಮಹೇಶ್ವರ ದೇವಳದಲ್ಲಿ ಗ್ರಾಮಸ್ಥರಿಂದ ವಿಶೇಷ ಪೂಜೆ ನಡೆಯಿತು.

ಮರೋಡಿ ನಾರಾಯಣ ಪೂಜಾರಿ ಕುಟುಂಬಸ್ಥರಿಂದ ಶ್ರೀ ಉಮಾಮಹೇಶ್ವರ ದೇವರಿಗೆ ವಿಶೇಷ ರಂಗಪೂಜೆ ಸಲ್ಲಿಸುವ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ ಇಸ್ರೇಲ್ ನಲ್ಲಿರುವ ಉದ್ಯೋಗಿಗಳು ಊರಿಗೆ ಕ್ಷೇಮವಾಗಿ ಊರಿಗೆ ಬರಲೆಂದು ಗ್ರಾಮಸ್ಥರಿಂದ ಸಾಮೂಹಿಕ ಪ್ರಾರ್ಥನೆ ಕೂಡ ಜರುಗಿತು.

ಇಸ್ರೇಲ್ ನಲ್ಲಿ ಮರೋಡಿ ಗ್ರಾಮದ ಹಲವು ಮಂದಿ ಉದ್ಯೋಗ ಮಾಡುತ್ತಿದ್ದು, ಇಸ್ರೇಲ್‌ ನಲ್ಲಿದ್ದುಕೊಂಡು ನಮ್ಮ ಊರಿನ ಅಭಿವೃದ್ಧಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ಹೀಗಾಗಿ ಯುದ್ಧ ನಿಂತರೆ ಎಲ್ಲ ದೇಶಗಳಿಗೂ ಓಳಿತಾಗುತ್ತದೆ. ಅದೇ ರೀತಿ ನಾನೂ ಕೂಡ ಇಸ್ರೇಲ್‌ ನಲ್ಲಿ ದುಡಿಮೆ ಮಾಡಿದ್ದು, ಆ ದೇಶದ ಮೇಲೆ ಅಭಿಮಾನವಿದೆ. ಈ ಕಾರಣಕ್ಕೆ ಎಲ್ಲರಿಗೂ ಒಳಿತಾಗಲಿ ಎಂದು ಪೂಜೆ, ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದು ಮರೋಡಿ ನಿವಾಸಿ ನಾರಾಯಣ ಪೂಜಾರಿ ಉಚ್ಚೂರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು