ಮಂಗಳೂರು: ಎಲ್ಲರೂ ಒಂದಾಗಿ ಸುಂದರ ನಾಡನ್ನು ನಿರ್ಮಿಸುವ ಅಗತ್ಯವಿದೆ ಎಂದು ಆಮ್ ಆದ್ಮಿ ಪಕ್ಷದ ಹಿತೈಷಿ, ಪೋಷಕ ಹಾಗೂ ಅನಿವಾಸಿ ಉದ್ಯಮಿ ಮೈಕಲ್ ಡಿಸೋಜಾ ಹೇಳಿದ್ದಾರೆ.
ಮಂಗಳೂರು ದಕ್ಷಿಣದ ಅಭ್ಯರ್ಥಿ ಸಂತೋಷ ಕಾಮತ್ ಪರವಾಗಿ ಬಸ್ತಿ ಗಾರ್ಡನ್ ನಿಂದ ಲೋವರ್ ಕಾರ್ ಸ್ಟ್ರಿಟ್ ತನಕ ನಡೆದ ಮನೆ ಮನೆ ಪ್ರಚಾರದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸ್ಟೀಫನ್ ಪಿಂಟೋ, ಪ್ರಸಾದ್ ಬಜಿಲಕೆರಿ, ವೆಂಕಟೇಶ ಬಾಳಿಗಾ, ಜೈದೇವ ಶೆಣೈ, ನಜಿರ್ ಅಹ್ಮದ್, ಹಮೀದ್ ಪಡೀಲ್, ವಾಸುದೇವ್ ಕುಲಶೇಖರ ಹಾಗು ಇತರರು ಉಪಸ್ಥಿತರಿದ್ದರು.