News Karnataka Kannada
Monday, April 29 2024
ಮಂಗಳೂರು

ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನ ಆಚಾರದಿಂದ ತತ್ವ ರಕ್ಷಣೆ: ಡಾ. ಗುರುರಾಜ ಕರ್ಜಗಿ

New Project (1)
Photo Credit : News Kannada

ಧರ್ಮಸ್ಥಳ: ಧರ್ಮದಲ್ಲಿ ಪ್ರೀತಿ ಮತ್ತು ಅಂತಃಕರಣವಿರುತ್ತದೆಯೇ ಹೊರತು ಖಡ್ಗ ಮತ್ತು ಕ್ರೂರತೆಯಲ್ಲ ಎಂದು ಡಾ. ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.

ಅಮೃತವರ್ಷಿಣಿ ಸಭಾಭವನದಲ್ಲಿ ಸೋಮವಾರ ಲಕ್ಷದೀಪೋತ್ಸವದ ಪ್ರಯುಕ್ತ ಏರ್ಪಡಿಸಿದ್ದ 91ನೇ ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮದ ಅರ್ಥ ಗೊತ್ತಿಲ್ಲದದವರ ಭಾಷೆ ಹಿಂಸೆ. ಧರ್ಮ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದಾದಲ್ಲಿ ಅದನ್ನು ಯಾರೋ ತಪ್ಪಾಗಿ ತಿರುಚಿ ಪಸರಿಸುತ್ತಿದ್ದಾರೆ ಎಂದರ್ಥ ಎಂದು ತಿಳಿಸಿದರು.

ಧರ್ಮದಲ್ಲಿರುವ ತತ್ವ ಮತ್ತು ಆಚಾರಗಳೆಂಬ ಎರಡು ವಿಭಿನ್ನ ಭಾಗಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವುತ್ತಿದ್ದೇವೆ. ಆಚಾರ ಎಂಬುದು ತೆಂಗಿನ ಚಿಪ್ಪಿನಂತೆ ಒಳಗಿರುವ ತತ್ವ ರಕ್ಷಣೆ ಮಾಡುತ್ತದೆ. ಧರ್ಮ ಸಂರಕ್ಷಣೆ ಆಚಾರದಿಂದ ಸಾಧ್ಯ ಎಂದರು. ಸರ್ವಧರ್ಮ ಸಮನ್ವಯತೆಗೆ ಸಾರ್ಥಕ ಹೆಸರು ಧಮಸ್ಥಳ. ಕ್ಷೇತ್ರದ ಎಲ್ಲಾ ಕೆಲಸಗಳಲ್ಲೂ ಸಾಮರಸ್ಯವಿದೆ. ಸಮ್ಮೇಳನದಂತಹ ಕಾರ್ಯಗಳನ್ನು ಪರಂಪರಾಗತವಾಗಿ ವೃತದಂತೆ ನಡೆಸಿಕೊಂಡು ಬರುವುದು ದೊಡ್ಡ ಸಾಧನೆ ಎಂದು ಶ್ಲಾಘಿಸಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಸಿದ್ದಗಂಗಾ ಮಠದ ಪೀಠಾಧಿಪತಿ ಸಿದ್ದಗಂಗಾ ಸ್ವಾಮಿಗಳು ವಹಿಸಿದ್ದರು. ಡಾ.ಡಿ ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದರು. ಉಪನ್ಯಾಸಕರಾದ ಡಾ. ಬಿ.ವಿ ಆರತಿ, ಮಹಮ್ಮದಗೌಸ ರ ಹವಾಲ್ದಾರ್ ಮತ್ತು ಎಂ. ಆರ್ ವೆಂಕಟೇಶ್ ಉಪಸ್ಥಿತರಿದ್ದರು. ಗ್ರಾ. ಪಂ ಉಪಾಧ್ಯಕ್ಷ ಶ್ರೀನಿವಾಸ್ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು