ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಮಾನವೀಯತೆ ಮೆರೆದ ಘಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಗಣೇಶ್ ಪೂಜಾರಿ ಎನ್ನುವವರು ರಸ್ತೆ ಅಪಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ 45 ದಿನ ಕೋಮಾದಲ್ಲಿದ್ದರು. ಸಂಕಷ್ಟಕ್ಕೆ ಒಳಗಾಗಿದ್ದ ಯುವಕನೋರ್ವನ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಇನಾಯತ್ ಅಲಿ ಅವರ ದೊಡ್ಡ ಗುಣ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.
ಬಿಲ್ ಕೇಳಿ ಕುಟುಂಬ ಕಂಗಾಲು: ಆಸ್ಪತ್ರೆ ಬಿಲ್ ಒಟ್ಟು 24 ಲಕ್ಷ ರೂಪಾಯಿ ಆಗಿತ್ತು. ಇಷ್ಟು ದೊಡ್ಡ ಮೊತ್ತದ ಬಿಲ್ ಕಟ್ಟಲಾಗದೆ ಗಾಯಾಳು ಕುಟುಂಬಸ್ಥರು ಕಂಗಾಲಾಗಿದ್ದರು. ವಿಷಯ ತಿಳಿದ ಕಾಂಗ್ರೆಸ್ ಅಭ್ಯರ್ಥಿ ಅಲಿ ಖಾಸಗಿ ಆಸ್ಪತ್ರೆಯ 17 ಲಕ್ಷ ರೂಪಾಯಿ ಬೀಲ್ ಪಾವತಿಸಿದ್ದಾರೆ.
ಸಂಕಷ್ಟದ ಸಮಯದಲ್ಲಿ ಇನಾಯತ್ ಅಲಿಯವರು ದೇವರಾಗಿ ಬಂದು ಮಗನನ್ನು ಉಳಿಸಿಕೊಟ್ಟಿದ್ದಾರೆ. ಅವರ ಇಂತಹ ಪುಣ್ಯದ ಕಾರ್ಯವನ್ನು ವರ್ಣಿಸಲು ಪದಗಳೇ ಇಲ್ಲ.
– ಗಣೇಶ್ ಪೂಜಾರಿ ತಾಯಿ
ಇನಾಯತ್ ಅಲಿಯಂತಹವರು ಕ್ಷೇತ್ರಕ್ಕೆ ಬೇಕು. ನಾನು ಗಾಯಗೊಂಡು ಆಸ್ಪತ್ರೆಯಲ್ಲಿದ್ರೆ 17 ಲಕ್ಷದವರೆಗೆ ಬಿಲ್ ಕಟ್ಟಿದ್ದಾರೆ. ತಿಂಗಳಿಗೆ ಟೆಸ್ಟ್ಗೆ ಹೋಗಬೇಕಾದರೆ 6 ಸಾವಿರ ರೂ.ಬೇಕಾಗಿತ್ತು. ಇದನ್ನೆಲ್ಲ ಅವರೇ ನೋಡಿಕೊಂಡಿದ್ದಾರೆ. ಏನೇ ಆದರೂ ನಾನು ನೋಡಿಕೊಳ್ಳುತ್ತೇ ಎಂದು ಭರವಸೆ ನೀಡಿದ್ದರು. ಅದರಂತೆ ನೋಡಿಕೊಂಡಿದ್ದಾರೆ.
– ಗಣೇಶ್ ಪೂಜಾರಿ, ಗಾಯಾಳು
ಮಗನನ್ನು ಐಸಿಯುವಿನಿಂದ ಹೊರ ಹಾಕಿ ಸಹಾಯ ಮಾಡಿದರು. ಬೆಳಗ್ಗೆ, ಸಂಜೆ, ರಾತ್ರಿ 12 ಗಂಟೆಗೆ ಕೂಡ ಆಸ್ಪತ್ರೆಗೆ ಬಂದು ನೋಡಿಕೊಂಡಿದ್ದಾರೆ. ಅಲ್ಲದೇ ಆಗಾಗ್ಗೆ ಆರೋಗ್ಯ ಕುರಿತು ವಿಚಾರಣೆ ನಡೆಸಿದ್ದಾರೆ.
– ಗಣೇಶ್ ಪೂಜಾರಿ ತಂದೆ