News Karnataka Kannada
Saturday, May 18 2024
ಮಂಗಳೂರು

ಕೋಮಾದಲ್ಲಿದ್ದ ಗಾಯಾಳುವಿನ ಚಿಕಿತ್ಸೆಗೆ 17 ಲಕ್ಷ ರೂ. ವೆಚ್ಚ ಭರಿಸಿದ ಇನಾಯತ್‌

Rs 17 lakh has been sanctioned for the treatment of the injured who was in a coma. Inayat pays for the cost: People appreciate humanitarian work
Photo Credit : Twitter

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಇನಾಯತ್ ಅಲಿ ಮಾನವೀಯತೆ ಮೆರೆದ ಘಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಗಣೇಶ್ ಪೂಜಾರಿ ಎನ್ನುವವರು ರಸ್ತೆ ಅಪಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ 45 ದಿನ ಕೋಮಾದಲ್ಲಿದ್ದರು. ಸಂಕಷ್ಟಕ್ಕೆ ಒಳಗಾಗಿದ್ದ ಯುವಕನೋರ್ವನ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಇನಾಯತ್‌ ಅಲಿ ಅವರ ದೊಡ್ಡ ಗುಣ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.

ಬಿಲ್‌ ಕೇಳಿ ಕುಟುಂಬ ಕಂಗಾಲು: ಆಸ್ಪತ್ರೆ ಬಿಲ್ ಒಟ್ಟು 24 ಲಕ್ಷ ರೂಪಾಯಿ ಆಗಿತ್ತು. ಇಷ್ಟು ದೊಡ್ಡ ಮೊತ್ತದ ಬಿಲ್ ಕಟ್ಟಲಾಗದೆ ಗಾಯಾಳು ಕುಟುಂಬಸ್ಥರು ಕಂಗಾಲಾಗಿದ್ದರು. ವಿಷಯ ತಿಳಿದ ಕಾಂಗ್ರೆಸ್ ಅಭ್ಯರ್ಥಿ ಅಲಿ ಖಾಸಗಿ ಆಸ್ಪತ್ರೆಯ 17 ಲಕ್ಷ ರೂಪಾಯಿ ಬೀಲ್ ಪಾವತಿಸಿದ್ದಾರೆ.

ಸಂಕಷ್ಟದ ಸಮಯದಲ್ಲಿ ಇನಾಯತ್‌ ಅಲಿಯವರು ದೇವರಾಗಿ ಬಂದು ಮಗನನ್ನು ಉಳಿಸಿಕೊಟ್ಟಿದ್ದಾರೆ. ಅವರ ಇಂತಹ ಪುಣ್ಯದ ಕಾರ್ಯವನ್ನು ವರ್ಣಿಸಲು ಪದಗಳೇ ಇಲ್ಲ.
– ಗಣೇಶ್ ಪೂಜಾರಿ ತಾಯಿ

ಇನಾಯತ್ ಅಲಿಯಂತಹವರು ಕ್ಷೇತ್ರಕ್ಕೆ ಬೇಕು. ನಾನು ಗಾಯಗೊಂಡು ಆಸ್ಪತ್ರೆಯಲ್ಲಿದ್ರೆ 17 ಲಕ್ಷದವರೆಗೆ ಬಿಲ್ ಕಟ್ಟಿದ್ದಾರೆ. ತಿಂಗಳಿಗೆ ಟೆಸ್ಟ್‌ಗೆ ಹೋಗಬೇಕಾದರೆ 6 ಸಾವಿರ ರೂ.ಬೇಕಾಗಿತ್ತು. ಇದನ್ನೆಲ್ಲ ಅವರೇ ನೋಡಿಕೊಂಡಿದ್ದಾರೆ. ಏನೇ ಆದರೂ ನಾನು ನೋಡಿಕೊಳ್ಳುತ್ತೇ ಎಂದು ಭರವಸೆ ನೀಡಿದ್ದರು. ಅದರಂತೆ ನೋಡಿಕೊಂಡಿದ್ದಾರೆ.
– ಗಣೇಶ್ ಪೂಜಾರಿ, ಗಾಯಾಳು

ಮಗನನ್ನು ಐಸಿಯುವಿನಿಂದ ಹೊರ ಹಾಕಿ ಸಹಾಯ ಮಾಡಿದರು. ಬೆಳಗ್ಗೆ, ಸಂಜೆ, ರಾತ್ರಿ 12 ಗಂಟೆಗೆ ಕೂಡ ಆಸ್ಪತ್ರೆಗೆ ಬಂದು ನೋಡಿಕೊಂಡಿದ್ದಾರೆ. ಅಲ್ಲದೇ ಆಗಾಗ್ಗೆ ಆರೋಗ್ಯ ಕುರಿತು ವಿಚಾರಣೆ ನಡೆಸಿದ್ದಾರೆ.
– ಗಣೇಶ್ ಪೂಜಾರಿ ತಂದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು