ಬಂಟ್ವಾಳ: ಸ್ವಾತಂತ್ರ್ಯ ಯೋಧ ದಿವಂಗತ ಡಾ.ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಮಾರಂಭದ ಪೂರ್ವಭಾವಿ ಸಭೆಯ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸ್ವಾತಂತ್ರ್ಯ ಯೋಧ ದಿವಂಗತ ಡಾ.ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ ಅಧ್ಯಕ್ಷರೂ , ಹಿರಿಯ ಪತ್ರಕರ್ತರಾದ ಅಮ್ಮೆಂಬಳ ಆನಂದ ಅವರು ಡಾ. ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಮಾರಂಭದ ರೂಪುರೇಷೆಗಳನ್ನು ವಿವರಿಸಿದರು.
ದೇಶಭಕ್ತಿ ಗೀತೆ ಸ್ಪರ್ಧೆ, ಅಮ್ಮೆಂಬಳ ಬಾಳಪ್ಪರ ಸ್ಮರಣಾರ್ಥ ಸಂಚಿಕೆ, ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮ ಆಯೋಜನೆ ಕುರಿತು ಸಮಾಲೋಚನೆ ನಡೆಸಲಾಯಿತು.
ಡಾ.ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಮಾರಂಭದ ಸಮಿತಿಗೆ ಹಿರಿಯ ಪತ್ರಕರ್ತರಾದ ಅಮ್ಮೆಂಬಳ ಆನಂದ ಅವರನ್ನು ಗೌರವಾಧ್ಯಕ್ಷರಾಗಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ.ತುಕಾರಾಮ ಪೂಜಾರಿ ಅವರನ್ನು ಅಧ್ಯಕ್ಷರಾಗಿ , ಪುಂಡಾರೀಕ್ಷಾ ಯು. ಪ್ರಧಾನ ಕಾರ್ಯದರ್ಶಿ ,ಉಮೇಶ್ ಪಿ.ಕೆ ಅವರನ್ನು ಕೋಶಾಧಿಕಾರಿ , ಮಂಜು ವಿಟ್ಲ ಅವರನ್ನು ಪ್ರಧಾನ ಸಂಯೋಜಕರು ,ಸದಾನಂದ ಬಂಗೇರ ಮುಡಿಪು, ಸುರೇಶ್ ಬಂಗೇರ, ದಾಮೋದರ ಸಾಲ್ಯಾನ್, ಜನಾರ್ದನ ಕುಲಾಲ್ ಅವರನ್ನು ಸಮಿತಿ ಸದಸ್ಯರಾಗಿ ಹಾಗೂ ಡಾ.ಆಶಾಲತಾ ಸುವರ್ಣ, ಡಾ.ರಶ್ಮಿ ಅಮ್ಮೆಂಬಳ, ರತ್ನಾವತಿ, ಪ್ರಸಾದ್ ಕುಮಾರ್ ಮಾರ್ನಬೈಲ್, ಡಾ.ದುಗ್ಗಪ್ಪ ಕಜೆಕಾರು ಅವರನ್ನು ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಡಿ.ಚಂದಪ್ಪ ಮೂಲ್ಯ, ಭೋಜ ಅಡ್ಯಾರ್, ಮಯೂರ್ ಉಳ್ಳಾಲ್, ಸದಾಶಿವ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಉಮೇಶ್ ಪಿ.ಕೆ ಸ್ವಾಗತಿಸಿ, ದಾಮೋದರ್ ಬಿ.ಎಂ ವಂದಿಸಿದರು.