ಮಂಗಳೂರು: ನಾಸೀರ್ ಬೆಂಬಲಿಗೆ ಪಾಕ್ ಪರ ಘೋಷಣೆ ಕೂಗಿದ ಹಿನ್ನೆಲೆ, ಪಾಕಿಸ್ತಾನ ಪರವಾಗಿ ಘೋಷಣೆ ಹಾಕಿದವರ ಬಂಧನ ಆಗಿಲ್ಲ, ಕಾಂಗ್ರೆಸ್ ಘಟನೆಯನ್ನು ವಿರೋಧಿಸಿಲ್ಲ ಇದು ಕಾಂಗ್ರೆಸ್ ಮಾನಸಿಕತೆಯನ್ನು ತೋರಿಸುತ್ತದೆ. ಕಳೆದ ಬಾರಿ ಪಾಕಿಸ್ತಾನದ ದ್ವಜ ಹಿಡಿದು ಘೋಷಣೆ ಕೂಗಿದವರ ಬಂಧನ ಆಗಿಲ್ಲ,ಕಾಂಗ್ರೆಸ್ ತುಷ್ಟಿಕರ ನೀತಿ ಅನುಸರಿಸುತ್ತಿದೆ ಕಾಂಗ್ರೆಸ್ ಭಯೋತ್ಪಾದಕರ ಪರವಾಗಿ ಇದೆ ರಾಷ್ಟ್ರದ ವಿರೋಧಿ ಕೃತ್ಯ ಮಾಡಿದವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಕಾಂಗ್ರೇಸ್ ವಿರುದ್ಧ ಸಂಸದ ನಳಿನ್ ಕುಮಾರ್ ಕಟೀಲು ಕಿಡಿಕಾರಿದ್ದಾರೆ.
“ರಾಜ್ಯಸಭಾ ಸದಸ್ಯ ಖಂಡಿಸಬೇಕಿತ್ತು, ಅವರು ಮೌನವಾಗಿದ್ದು ಘೋಷಣೆ ಕೂಗಿದವರನ್ನು ತಕ್ಷಣ ಬಂಧಿಸಿ ಜೈಲಿಗೆ ಅಟ್ಟಬೇಕು. ನಾಸೀರ್ ಅವರನ್ನು ಉಚ್ಚಾಟನೆ ಮಾಡಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತ ಹದಗೆಟ್ಟಲು ಕಾಂಗ್ರೆಸ್ ಕಾರಣ. ದೇಶದ ಪರ ಕೆಲಸ ಮಾಡುವವರನ್ನು ಜೈಲಿಗೆ ಅಟ್ಟುತ್ತಾರೆ, ರಾಷ್ಟ್ರ ವಿರೋಧಿಗಳು ಮೆರೆಯುತ್ತಿದ್ದಾರೆ ಘೋಷಣೆ ಹಾಕಿದ್ದಾನೆ ಅಂತ ಬಿಜೆಪಿ ಹೇಳಿಲ್ಲ ಮಾಧ್ಯಮ ತೋರಿಸಿದ್ದು, ಬಹಳ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಮಂಗಳೂರಿನಲ್ಲಿ ಗುಡುಗಿದರು.