ಮೂಲ್ಕಿ: ಕೊಲ್ನಾಡಿನಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಕಾಪು ವಿಧಾಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್, ಇಂದು ಮನಸ್ಸು ತುಂಬಿ ಬರುತ್ತಿದೆ. ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳವ ಅವಕಾಶ ದೊರೆತಿದೆ. ಕರಾವಳಿ ಬಿಜೆಪಿ ಯ ಭದ್ರಕೋಟೆ ಪುನಃ ಪುನಃ ಮರುಸ್ಥಾಪಿಸಿ ಮೋದಿ ಅವರ ನಾಯಕತ್ವದಲ್ಲಿ ದೇಶವನ್ನು ಉನ್ನತ ಸ್ಥಾನಕ್ಕೇ ಏರಿಸುವ ಜವಾಬ್ದಾರಿ ಕಾರ್ಯಕರ್ತರದ್ದು ಎಂದರು.
ಕರಾವಳಿಯ 13 ಕ್ಷೇತ್ರಗಳಲ್ಲಿಯೂ ಬಿಜೆಪಿಗೆ ಜಯ ನಿಶ್ಚಿತ. ಬಜರಂಗದಳ ನಿಷೇಧ ಮಾಡುವ ಹಗಲುಗನಸನ್ನು ಕಾಂಗ್ರೆಸ್ನವರು ಬಿಟ್ಟು ಬಿಡಬೇಕು ಎಂದರು.