News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ಗೋ ರಕ್ಷಣೆಗಾಗಿ ಪ್ರತಿಭಟನೆ, ಸಂಘರ್ಷಕ್ಕೂ ನಾವು ರೆಡಿ – ಅತ್ತಾವರ

We are ready for protests and clashes for cow protection: Attavar
Photo Credit : News Kannada

ಮಂಗಳೂರು: ಗೋ ರಕ್ಷಣೆಗಾಗಿ ನಾವು ಯಾವ ಹಂತಕ್ಕೂ ಹೋಗಲು ಸಿದ್ದರಿದ್ದೇವೆ ಎಂದು ಬಜರಂಗದಳ ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಹೇಳಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಿನ ಸರ್ಕಾರ ಪರೋಕ್ಷವಾಗಿ ಗೋಕಳ್ಳರಿಗೆ ಬೆಂಬಲ ನೀಡುವ ಸಂಶಯ ಮೂಡುತ್ತಿದೆ. ಗೋ ರಕ್ಷಣೆಗಾಗಿ ನಮ್ಮ ಬಜರಂಗದಳ ಕಾರ್ಯಕರ್ತರು ಹೋರಾಟ, ಸಂಘರ್ಷ, ಪ್ರತಿಭಟನೆ ಎಲ್ಲದಕ್ಕೂ ಸಿದ್ದವಾಗಿದ್ದಾರೆ. ಕುರ್ಬಾನಿಗಾಗಿ ಆಡು, ಕುರಿ, ಕೋಳಿ ಇವುಗಳ ಬಲಿ ಕೊಡಲಿ. ಆದರೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ ಎಂದು ಆಗ್ರಹಿಸಿದರು.

ಈ ಬಗ್ಗೆ ಮುಸ್ಲಿಂ ಮುಖಂಡರು ಯುವಕರಿಗೆ ಕರೆ ನೀಡುವಂತೆ ಪುನೀತ್ ಅತ್ತಾವರ ಮನವಿ ಮಾಡಿದರು. ನಮ್ಮ ಮನವಿಗಳಿಗೆ ಬೆಲೆ ದೊರೆಯದೇ ಹೋದಲ್ಲಿ ಕ್ರಿಯೆಗೆ ತಕ್ಕಂತೆ ಬಜರಂಗದಳ ಪ್ರತಿಕ್ರಿಯೆ ನೀಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು