ಮಂಗಳೂರು: ಗೋ ರಕ್ಷಣೆಗಾಗಿ ನಾವು ಯಾವ ಹಂತಕ್ಕೂ ಹೋಗಲು ಸಿದ್ದರಿದ್ದೇವೆ ಎಂದು ಬಜರಂಗದಳ ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಿನ ಸರ್ಕಾರ ಪರೋಕ್ಷವಾಗಿ ಗೋಕಳ್ಳರಿಗೆ ಬೆಂಬಲ ನೀಡುವ ಸಂಶಯ ಮೂಡುತ್ತಿದೆ. ಗೋ ರಕ್ಷಣೆಗಾಗಿ ನಮ್ಮ ಬಜರಂಗದಳ ಕಾರ್ಯಕರ್ತರು ಹೋರಾಟ, ಸಂಘರ್ಷ, ಪ್ರತಿಭಟನೆ ಎಲ್ಲದಕ್ಕೂ ಸಿದ್ದವಾಗಿದ್ದಾರೆ. ಕುರ್ಬಾನಿಗಾಗಿ ಆಡು, ಕುರಿ, ಕೋಳಿ ಇವುಗಳ ಬಲಿ ಕೊಡಲಿ. ಆದರೆ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಬೇಡಿ ಎಂದು ಆಗ್ರಹಿಸಿದರು.
ಈ ಬಗ್ಗೆ ಮುಸ್ಲಿಂ ಮುಖಂಡರು ಯುವಕರಿಗೆ ಕರೆ ನೀಡುವಂತೆ ಪುನೀತ್ ಅತ್ತಾವರ ಮನವಿ ಮಾಡಿದರು. ನಮ್ಮ ಮನವಿಗಳಿಗೆ ಬೆಲೆ ದೊರೆಯದೇ ಹೋದಲ್ಲಿ ಕ್ರಿಯೆಗೆ ತಕ್ಕಂತೆ ಬಜರಂಗದಳ ಪ್ರತಿಕ್ರಿಯೆ ನೀಡಲಿದೆ.