ಮಂಗಳೂರು: ಪತ್ನಿ ಜತೆ ಮನಸ್ತಾಪಗೊಂಡು ವ್ಯಕ್ತಿಯೊಬ್ಬರು ತನ್ನ ಬೈಕನ್ನು ಮರವೂರು ಸೇತುವೆ ಬಳಿ ಬಿಟ್ಟು ನಾಪತ್ತೆಯಾಗಿದ್ದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಶಂಕೆ ವ್ಯಕ್ತವಾಗಿದೆ.
ನಗರದ ಕದ್ರಿ ಠಾಣಾ ವ್ಯಾಪ್ತಿಯ ವ್ಯಾಸ ನಗರದ ನಿವಾಸಿ ವಿವೇಕ್ ಪ್ರಭು (45 ವರ್ಷ) ನಾಪತ್ತೆಯಾದ ವ್ಯಕ್ತಿ. ಇವರು ನಿನ್ನೆ ರಾತ್ರಿ ಮನೆಯಿಂದ ತೆರಳಿದ್ದರು ಮನೆಯಲ್ಲಿ ಪತಿ ಪತ್ನಿ ನಡುವೆ ಗಲಾಟೆ ನಡೆದು ಪತಿ ಮನೆ ಬಿಟ್ಟು ತೆರಳಿದ್ದರು ಎನ್ನಲಾಗಿದೆ.
ವಿವೇಕ್ ಪ್ರಭು ಫಲ್ನೀರ್ ಪೆಟ್ರೋಲ್ ಪಂಪ್ ನಲ್ಲಿ ಅಕೌಂಟೆಟ್ ನೋಡಿಕೊಳ್ಳುತ್ತಿದ್ದರು ಇವರ ಪತ್ನಿ ಬ್ಯುಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಇಂದು ಬೆಳಿಗ್ಗೆ ವಿವೇಕ್ ಪ್ರಭು ಬೈಕ್ ಕೀ ಸಹಿತ ಮರವೂರು ಸೇತುವೆ ಬಳಿ ಪತ್ತೆಯಾಗಿತ್ತು ಹಾಗಾಗಿ ನದಿಗೆ ಹಾರಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ . ಅವರ ಶವ ಪತ್ತೆಯಾಗಿದೆ ಎನ್ನುವ ಗಾಳಿ ಸುದ್ದಿ ಇತ್ತು ಆದರೆ ಕಾವೂರ್ ಮತ್ತು ಬರ್ಕೆ ಪೊಲೀಸರು ತಮಗೇನೂ ಮಾಹಿತಿ ಲಭಿಸಿಲ್ಲ ಎಂದಿದ್ದಾರೆ .ಪತ್ನಿ ಕದ್ರಿ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ.