ಮಂಗಳೂರು: ಮಂಗಳೂರು ನಗರ ದಕ್ಷಿಣ ವ್ಯಾಪ್ತಿಯಲ್ಲಿ 1.75 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ವಿವಿಧ ಚರ್ಚ್ ಗಳ ಅಭಿವೃದ್ಧಿಗೆ ಅಲ್ಪ ಸಂಖ್ಯಾಕ ಅಭಿವೃದ್ಧಿ ಇಲಾಖೆಯ ಮೂಲಕ ಅನುದಾನ ಬಿಡುಗಡೆಗೊಳಿಸಲಾಗಿದೆ. ಅಲ್ಪ ಸಂಖ್ಯಾತ ಅಭಿವೃದ್ಧಿ ಇಲಾಖೆಯ ಮೂಲಕ ಚರ್ಚ್ ಹಾಗೂ ಇತರೆ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಮಾತ್ರವೇ ಅನುದಾನ ಬಳಕೆ ಮಾಡಲು ಅವಕಾಶವಿರುವ ಕಾರಣ ವಿವಿಧ ಚರ್ಚ್ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.
ಒಟ್ಟು 1.75 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳದೇವಿ ಕಾಂತಿ ದೇವಾಲಯ ಪುರಾತನ ಸ್ಮಶಾನದ ಆವರಣ ಗೋಡೆ ಅಭಿವೃದ್ಧಿ, ಬೋಳೂರು ಬೊಕ್ಕಪಟ್ಣ ವಿಶ್ರಾಂತಿ ಚರ್ಚ್ ಇದರ ದುರಸ್ಥಿ ಮತ್ತು ನವೀಕರಣ ಹಾಗೂ ಶಕ್ತಿನಗರದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ವಿನಿಯೋಗಗೊಳ್ಳಲಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಮೇಯರ್ ಜಯಾನಂದ್ ಅಂಚನ್, ಪಾಲಿಕೆ ಸದಸ್ಯರಾದ, ಪ್ರೇಮಾನಂದ ಶೆಟ್ಟಿ, ಶಕಿಲಾ ಕಾವಾ, ಸುಧೀರ್ ಶೆಟ್ಟಿ ಕಣ್ಣೂರು, ಜಗದೀಶ್ ಶೆಟ್ಟಿ ಬೋಳೂರು,ವನಿತಾ ಪ್ರಸಾದ್, ಸಿ.ಎಸ್.ಐ ಧರ್ಮಧ್ಯಕ್ಷರಾದ ಹೇಮಚಂದ್ರಕುಮಾರ್, ವಲಯ ಅಧ್ಯಕ್ಷರಾದ ವಿಲಿಯಂ ಕುಂದರ್ , ರೆವೆರೆಂಡ್ ಎಬಿನೆಜೆರ್ ಜತಣ್ಣ, ರೆವೆರೆಂಡ್. ಸಂತೋಷ್ ಕುಮಾರ್, ರೆವೆರೆಂಡ್ ವಿನ್ಫ್ರೀಡ್ ಅಮ್ಮನ್ನ, ಅರ್ಷದ್ ಪೋಪಿ, ವನಿತಾ ಪ್ರಸಾದ್, ರೆವ್. ಐಸನ್ ಪಲನ್ನ, ರೋಶನ್ ರೆನೋಲ್ಡ್, ಸುಶೀಲ್ ಪಾಲನ್ನ, ವರುಣ್ ಆಂಬಟ್, ಗಾಡ್ವಿನ ಕಾರ್ಯಪ್ಪ, ರೆನಾಲ್ಡ್ ಪೀಟರ್, ಮಾಕ್ಲಿನ್, ಕೌಶಿಕ್ ಶಕ್ತಿನಗರ ಮುಂತಾದವರಿದ್ದರು.