ಮಂಗಳೂರು: ಉಡುಪಿ ಸಂಪರ್ಕ ಕಲ್ಪಿಸುವ ಕೂಳೂರು ಗುರುಪುರ ನದಿಗೆ ಆರು ಪಥ ಸೇತುವೆ ನಿರ್ಮಿಸುವ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು ಸರಕಾರ ಗುತ್ತಿಗೆದಾರರಿಗೆ ನೀಡಿದ ಅವಧಿ ಮುಗಿಯುವ ಹಂತದಲ್ಲಿದೆ ಇದರ ನಡುವೆ ಗುತ್ತಿಗೆದಾರರ ಬದಲಾವಣೆಯು ಸಮಸ್ಯೆ ತಂದೊಡ್ಡಿದೆ.
ರಾಷ್ಟ್ರೀಯ ಹೆದ್ದಾರಿ 66 ರ ಹೆದ್ದಾರಿ ಚತುಷ್ಪತಕ್ಕೆ ಬರೋಬ್ಬರಿ 10 ವರ್ಷ ಪಂಪೆಲ್ ಮೇಲೆ ಪೂರ್ಣ ನಿರ್ಮಾಣಕ್ಕೂ ಏಳೆಂಟು ವರ್ಷ ತಗುಲಿದರೆ ಈಗ ಕೂಳೂರು ಸೇತುವೆಯ ಕಾಮಗಾರಿ ಕುಂಟು ತಾಸಾಗಿದೆ. ಈಗಾಗಲೇ ಕೇರಳ ಗೋವಾ ನಡುವೆ ಸಂಪರ್ಕ ಕಲ್ಪಿಸುವ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಾದು ಹೋಗುವ ಪ್ರಮುಖ ಹೆದ್ದಾರಿಯಾಗಿದೆ.
ಸಾವಿರಾರು ಉದ್ದಿಮೆಗಳು ಬಂದರು , ಗೂಡ್ಸ್ ರೈಲು ಸಂಪರ್ಕ ಹೀಗೆ ಆರ್ಥಿಕ ಚಟುವಟಿಕೆ ಕೇಂದ್ರ ಸ್ಥಳದಲ್ಲಿ ಹಾದುಹೋಗಿದೆ ವಾಹನಗಳ ಒತ್ತಡ ಹೆಚ್ಚುತ್ತಲೆ ಇದೆ. ಅಧಿಕ ಟ್ರಕ್ ಟ್ಯಾಂಕರ್ ಕಂಟೇನರ್ ಗಳು ಹಳೆ ಸೇತುವೆಯಲ್ಲಿ ನಿತ್ಯವು ಸಾಗುತ್ತವೆ , ಈಗಾಗಲೇ ಶಿಥಿಲ ಅವಸ್ಥೆಯಲ್ಲಿರುವ ಈ ಸೇತುವೆ ಆಯಸ್ಸು ಮುಗಿದಿದ್ದರೂ ಈಗ ಓಡಾಟಕ್ಕೆ ಬಳಕೆಯಾಗುತ್ತಿದೆ . ಹೆಚ್ಚಿನ ಭಾರವನ್ನು ತಾಳಿಕೊಳ್ಳುವ ಶಕ್ತಿ ಕಳೆದುಕೊಂಡಿದೆ ಸರಕಾರ ತುರ್ತಾಗಿ ಯಾವುದೇ ಅವಘಡ ಸಂಭವಿಸುವ ಮುನ್ನ ಸೇತುವೆ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕಿದೆ.