ಮಂಗಳೂರು: ಜೂನ್ ಮೊದಲ ವಾರದಲ್ಲಿ ನೈಋತ್ಯ ಮಾನ್ಸೂನ್ ಕೇರಳ ಕರಾವಳಿಯನ್ನು ಪ್ರವೇಶಿಸಲಿದೆ. ನೈಋತ್ಯ ಮಾನ್ಸೂನ್ ಮೇ 20ರೊಳಗೆ ಅಂಡಮಾನ್ ಸಮುದ್ರವನ್ನು ಆವರಿಸಲಿದೆ.
ಮೇ 22ರಂದು ಅಂಡಮಾನ್ ಮತ್ತು ನಿಕೋಬರ್ ದ್ವೀಪಗಳನ್ನು ಸಂಪೂರ್ಣವಾಗಿ ಆವರಿಸಲಿದೆ. ಜೂನ್ ಒಂದರ ವೇಳೆಗೆ ಕೇರಳವನ್ನು ಪ್ರವೇಶಿಸಲಿದೆ. ಇದೇ ವೇಳೆ ಕರ್ನಾಟಕ ಕರಾವಳಿ ಸೇರಿದಂತೆ ರಾಜ್ಯದಲ್ಲಿ ಮುಂಗಾರಿನ ಆಗಮನವಾಗಲಿದೆ. ಈ ವರ್ಷ ದೇಶದ ಉತ್ತರ ಭಾಗದಲ್ಲಿ ನಿರೀಕ್ಷೆಗಿಂತ ಅಧಿಕ ಮಳೆಯಾಗಲಿದೆ. ಅದೇ ರೀತಿ ಜೂನ್ ಮತ್ತು ಜುಲೈನಲ್ಲಿ ಕೇರಳದಲ್ಲಿ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.