News Karnataka Kannada
Tuesday, April 30 2024
ಮಂಗಳೂರು

ಮಂಗಳೂರು: ಜನವರಿ 15ರಂದು ನಡೆಯಲಿದೆ “ಸ್ವರ ಸಂಕ್ರಾಂತಿ ಉತ್ಸವ – 23” ಸಂಗೀತ ಕಾರ್ಯಕ್ರಮ

Swara
Photo Credit : By Author

ಮಂಗಳೂರು:  ಮಂಗಳಾದೇವಿಯ ರಾಮಕೃಷ್ಣ ಮಠಕ್ಕೆ ಇದೀಗ 75ನೇ ವರ್ಷದ ಸಂಭ್ರಮ. ಅಮೃತ ಮಹೋತ್ಸವ ಹಾಗೂ ಮಕರ ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ಮಂಗಳೂರಿನ “ಸ್ವರಾಲಯ ಸಾಧನಾ ಫೌಂಡೇಶನ್” ಸಹಯೋಗದಲ್ಲಿ ಇದೇ ಜನವರಿ 15ರಂದು, ಭಾನುವಾರ ಸಂಜೆ 4.30 ಕ್ಕೆ “ಸ್ವರ ಸಂಕ್ರಾಂತಿ ಉತ್ಸವ – 23” ಎಂಬ ವಿಶೇಷ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಶ್ವ ವಿಖ್ಯಾತ ವಯೊಲಿನ್ ಕಲಾವಿದರಾದ ಚೆನ್ನೈನ ವಿದ್ವಾನ್ ಗಣೇಶ್ ಮತ್ತು ವಿದ್ವಾನ್ ಕುಮರೇಶ್ ಅವರು ರಾಮಕೃಷ್ಣ ಆಶ್ರಮದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ದ್ವಂದ್ವ ವಯೊಲಿನ್ ಕಛೇರಿ ನಡೆಸಿ ಕೊಡಲಿದ್ದಾರೆ. ಮೃದಂಗದಲ್ಲಿ ವಿದ್ವಾನ್ ಆರ್. ಶಂಕರನಾರಾಯಣನ್ ಹಾಗೂ ಘಟಂನಲ್ಲಿ ವಿದ್ವಾನ್ ತ್ರಿಚ್ಚಿ ಕೃಷ್ಣಸ್ವಾಮಿ ಸಹಕರಿಸಲಿದ್ದಾರೆ.

ಸ್ವರ ಸಾಧನಾ ಪ್ರಶಸ್ತಿ – 23
ಇದೇ ಸಂದರ್ಭದಲ್ಲಿ ಕರಾವಳಿ ಕರ್ನಾಟಕದ ಐದು ಮಂದಿ ಹಿರಿಯ ಸಂಗೀತ ಗುರುಗಳಾದ ವಿದುಷಿ ಸತ್ಯವತಿ
ಮುಡಂಬಡಿತ್ತಾಯ, ವಿದ್ವಾನ್ ಎಂ. ನಾರಾಯಣ, ವಿದ್ವಾನ್ ಟಿ. ಜಿ. ಗೋಪಾಲಕೃಷ್ಣನ್, ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಮತ್ತು ವಿದ್ವಾನ್ ತಿರುಚಿ ಕೆ. ಆರ್. ಕುಮಾರ್ ಇವರೆಲ್ಲರಿಗೂ ಸಂಗೀತ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗೆ ಹಾಗೂ ಅವರ ಭಾರತೀಯ ಸಂಸ್ಕೃತಿಯ ಬಹಳ ಪ್ರಮುಖ ಆಯಾಮವಾಗಿರುವ ಸಂಗೀತ ಸರಸ್ವತಿಯ ಅನುಪಮ ಸೇವೆಯನ್ನು ಗುರುತಿಸಿ ಕೃತಜ್ಞತೆ ಗಳೊಂದಿಗೆ “ಸ್ವರ ಸಾಧನಾ ಪ್ರಶಸ್ತಿ – 23” ಯನ್ನು ನೀಡಿ ಗೌರವಿಸಲಾಗುವುದು.

ಈ ಸ್ವರ ಸಂಕ್ರಾಂತಿ ಉತ್ಸವ-23 ಕ್ಕೆ ಸಂಗೀತಾಸಕ್ತರಿಗೆ ಮುಕ್ತ ಪ್ರವೇಶ ಲಭ್ಯವಿದ್ದು, ಆಸಕ್ತರು ತಮ್ಮ ಉಚಿತ ಪಾಸ್ ಗಳನ್ನು ರಾಮಕೃಷ್ಣ ಮಠದ ಕಛೇರಿಯಿಂದ ಸ್ವೀಕರಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು