News Karnataka Kannada
Saturday, May 11 2024
ಮಂಗಳೂರು

ಮಂಗಳೂರು: ಇಸ್ಲಾಂ ಶಾಂತಿಯ ಸಂಕೇತ ಅಲ್ಲ, ಹಿಂಸೆಯ ದಾರಿ ಎಂದ ಶರಣ್ ಪಂಪ್ ವೆಲ್

Sharan Pumpwell says Islam is not a symbol of peace, it is a way of violence
Photo Credit : News Kannada

ಮಂಗಳೂರು: ದೇಶದಲ್ಲಿ ಹಿಂದೂಗಳ ಹತ್ಯೆ, ಪೊಲೀಸರ ಮೇಲೆ ದಾಳಿ, ರಸ್ತೆಗಳಲ್ಲಿ ಅಂಗಡಿಗಳಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ಇಂಥ ಘೋರ ಕೃತ್ಯಗಳು ಪದೇ ಪದೇ ಸಂಭವಿಸುತ್ತಿರುವುದಕ್ಕೆ ಅವರಿಗೆ ಮದ್ರಸದಲ್ಲಿ ಸಿಗುತ್ತಿರುವ ಶಿಕ್ಷಣವೇ ಪ್ರಮುಖ ಕಾರಣ. ಆ ಶಿಕ್ಷಣ ಪಡೆದ ಯುವಕರು ಇಂದು ಹಿಂದೂಗಳ ವಿರುದ್ಧ ದಾಳಿ ಮಾಡುತ್ತಿದ್ದಾರೆಂದು ವಿಶ್ವ ಹಿಂದು ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು .

ರಾಜಸ್ಥಾನದ ಉದಯಪುರದಲ್ಲಿ ಕನಯ್ಯಾಲಾಲ್ ಹತ್ಯೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಆಕ್ರೋಶ ಹೊರಹಾಕಿದ ಶರಣ್ ಪಂಪ್ ವೆಲ್ ಈ ದೇಶದಲ್ಲಿ ಸಾಕಷ್ಟು ಹಿಂದುಗಳ ಹತ್ಯೆಯಾಗಿದೆ ಆದ್ರೆ ನಿನ್ನೆ ರಾಜಸ್ಥಾನದ ಉದಯಪುರ್ ನಲ್ಲಿ ನಡೆದ ಅಮಾಯಕ ಹಿಂದುವಿನ ಘೋರ ಹತ್ಯೆಯ ಬಹುಶಃ ನಾವು ಇದುವರೆಗೂ ನೋಡಿರದ ಒಂದು ದುರಂತವಾಗಿದೆ.

ಒಬ್ಬ ಅಮಾಯಕ ವ್ಯಾಪಾರಸ್ಥನ ಅಂಗಡಿಗೆ ವ್ಯಾಪಾರದ ಸೋಗಿನಲ್ಲಿ ಬಂದು ಮಾಂಸ ಕಡಿಯುವ ರೀತಿಯಲ್ಲಿ ಕಡಿತಾರೆ ಅಷ್ಟೇ ಅಲ್ಲ ಅದರ ವೀಡಿಯೋ ಚಿತ್ರೀಕರಣ ಮಾಡಿ ಸಂತೋಷ ವ್ಯಕ್ತಪಡಿಸುತ್ತಾರೆ ಎಂದರೆ ಯೋಚಿಸಿ ಅವರ ಕ್ರೂರತೆ ಎಷ್ಟರಮಟ್ಟಿಗೆ ಇದೆ ಎಂಬುದು. ಇಸ್ಲಾಂ ಶಾಂತಿಯ ಸಂಕೇತ ದೇಶದಲ್ಲಿ ನಾವು ಶಾಂತಿಯಿಂದ ಬದುಕುವವರು ಆದರೂ ನಮ್ಮನ್ನು ಉಗ್ರಗಾಮಿಗಳೆಂದು ಕರೆಯುತ್ತಾರೆಂದು ಈ ದೇಶದ ಮುಸಲ್ಮಾನರು ಪದೇ ಪದೇ ಹೇಳ್ತಾರೆ. ನಾವು ಅಂಬೇಡ್ಕರ್ ನಂಬುವವರು ಎಂದು ಹೇಳುತ್ತಾರೆ.

ಆದ್ರೆ ಇಸ್ಲಾಂ ಶಾಂತಿಯ ಸಂಕೇತ ಅಲ್ಲ ಹಿಂಸೆಯ ದಾರಿ. ದೇಶದಲ್ಲಿ ಇಂದು ಅರಾಜಕತೆ ಸೃಷ್ಟಿಯಾಗುತ್ತಿದೆ ನಮ್ಮ ದೇವಸ್ಥಾನಗಳ ಮೇಲೆ ಹಿಂದೂ ಕಾರ್ಯಕರ್ತರ ಮೇಲೆ ದಾಳಿಯಾದರೆ ಯಾರು ಪ್ರಶ್ನೆ ಮಾಡಲ್ಲ. ದೇಶದ ಎಲ್ಲ ಸಂತರು ಸ್ವಾಮೀಜಿಗಳು ಯುವಕರಿಗೆ ಪ್ರೇರಣೆಯ ಸಂದೇಶ ಕೂಡಿ, ರಾಜಸ್ತಾನದ ಈ ಘಟನೆಯನ್ನ ಎಲ್ಲಾ ಹಿಂದೂಗಳು ಖಂಡಿಸಬೇಕು ಮೌನವನ್ನು ಮುರಿದು ಎಲ್ಲರೂ ಇದನ್ನು ಖಂಡನೆ ಮಾಡಬೇಕೆಂದು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು