ಮಂಗಳೂರು: ದೇಶದಲ್ಲಿ ಹಿಂದೂಗಳ ಹತ್ಯೆ, ಪೊಲೀಸರ ಮೇಲೆ ದಾಳಿ, ರಸ್ತೆಗಳಲ್ಲಿ ಅಂಗಡಿಗಳಲ್ಲಿ ಹಿಂದೂಗಳ ಮನೆಗಳ ಮೇಲೆ ದಾಳಿ ಇಂಥ ಘೋರ ಕೃತ್ಯಗಳು ಪದೇ ಪದೇ ಸಂಭವಿಸುತ್ತಿರುವುದಕ್ಕೆ ಅವರಿಗೆ ಮದ್ರಸದಲ್ಲಿ ಸಿಗುತ್ತಿರುವ ಶಿಕ್ಷಣವೇ ಪ್ರಮುಖ ಕಾರಣ. ಆ ಶಿಕ್ಷಣ ಪಡೆದ ಯುವಕರು ಇಂದು ಹಿಂದೂಗಳ ವಿರುದ್ಧ ದಾಳಿ ಮಾಡುತ್ತಿದ್ದಾರೆಂದು ವಿಶ್ವ ಹಿಂದು ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು .
ರಾಜಸ್ಥಾನದ ಉದಯಪುರದಲ್ಲಿ ಕನಯ್ಯಾಲಾಲ್ ಹತ್ಯೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ವತಿಯಿಂದ ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಆಕ್ರೋಶ ಹೊರಹಾಕಿದ ಶರಣ್ ಪಂಪ್ ವೆಲ್ ಈ ದೇಶದಲ್ಲಿ ಸಾಕಷ್ಟು ಹಿಂದುಗಳ ಹತ್ಯೆಯಾಗಿದೆ ಆದ್ರೆ ನಿನ್ನೆ ರಾಜಸ್ಥಾನದ ಉದಯಪುರ್ ನಲ್ಲಿ ನಡೆದ ಅಮಾಯಕ ಹಿಂದುವಿನ ಘೋರ ಹತ್ಯೆಯ ಬಹುಶಃ ನಾವು ಇದುವರೆಗೂ ನೋಡಿರದ ಒಂದು ದುರಂತವಾಗಿದೆ.
ಒಬ್ಬ ಅಮಾಯಕ ವ್ಯಾಪಾರಸ್ಥನ ಅಂಗಡಿಗೆ ವ್ಯಾಪಾರದ ಸೋಗಿನಲ್ಲಿ ಬಂದು ಮಾಂಸ ಕಡಿಯುವ ರೀತಿಯಲ್ಲಿ ಕಡಿತಾರೆ ಅಷ್ಟೇ ಅಲ್ಲ ಅದರ ವೀಡಿಯೋ ಚಿತ್ರೀಕರಣ ಮಾಡಿ ಸಂತೋಷ ವ್ಯಕ್ತಪಡಿಸುತ್ತಾರೆ ಎಂದರೆ ಯೋಚಿಸಿ ಅವರ ಕ್ರೂರತೆ ಎಷ್ಟರಮಟ್ಟಿಗೆ ಇದೆ ಎಂಬುದು. ಇಸ್ಲಾಂ ಶಾಂತಿಯ ಸಂಕೇತ ದೇಶದಲ್ಲಿ ನಾವು ಶಾಂತಿಯಿಂದ ಬದುಕುವವರು ಆದರೂ ನಮ್ಮನ್ನು ಉಗ್ರಗಾಮಿಗಳೆಂದು ಕರೆಯುತ್ತಾರೆಂದು ಈ ದೇಶದ ಮುಸಲ್ಮಾನರು ಪದೇ ಪದೇ ಹೇಳ್ತಾರೆ. ನಾವು ಅಂಬೇಡ್ಕರ್ ನಂಬುವವರು ಎಂದು ಹೇಳುತ್ತಾರೆ.
ಆದ್ರೆ ಇಸ್ಲಾಂ ಶಾಂತಿಯ ಸಂಕೇತ ಅಲ್ಲ ಹಿಂಸೆಯ ದಾರಿ. ದೇಶದಲ್ಲಿ ಇಂದು ಅರಾಜಕತೆ ಸೃಷ್ಟಿಯಾಗುತ್ತಿದೆ ನಮ್ಮ ದೇವಸ್ಥಾನಗಳ ಮೇಲೆ ಹಿಂದೂ ಕಾರ್ಯಕರ್ತರ ಮೇಲೆ ದಾಳಿಯಾದರೆ ಯಾರು ಪ್ರಶ್ನೆ ಮಾಡಲ್ಲ. ದೇಶದ ಎಲ್ಲ ಸಂತರು ಸ್ವಾಮೀಜಿಗಳು ಯುವಕರಿಗೆ ಪ್ರೇರಣೆಯ ಸಂದೇಶ ಕೂಡಿ, ರಾಜಸ್ತಾನದ ಈ ಘಟನೆಯನ್ನ ಎಲ್ಲಾ ಹಿಂದೂಗಳು ಖಂಡಿಸಬೇಕು ಮೌನವನ್ನು ಮುರಿದು ಎಲ್ಲರೂ ಇದನ್ನು ಖಂಡನೆ ಮಾಡಬೇಕೆಂದು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.