News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಶಿರಾಡಿ ರಸ್ತೆ ಚತುಷ್ಪಥಕ್ಕೆ 1.976 ಕೋಟಿ ರೂಪಾಯಿ ಬಿಡ್ಡ್ ಆಹ್ವಾನ

Rs 1,976 crore bid invited for four-laning of Shirdi road, says Minister Nitin Gatkari
Photo Credit : News Kannada

ಮಂಗಳೂರು:  ಶಿರಾಡಿ ಘಾಟಿ ವಿಭಾಗದ ಮಾರನಹಳ್ಳಿ ಅಡ್ಡ ಹೊಲೆ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸುಮಾರು 1.976 ಕೋಟಿ ರೂಪಾಯಿ ಮೊತ್ತದ ಬಿಡ್ಡ್ ಆಹ್ವಾನಿಸಲಾಗಿದೆ ಎಂದು ಕೇಂದ್ರ ಹೆದ್ದಾರಿ ಭೂಸಾರಿಗ ಸಚಿವ ನಿತಿನ್ ಗಟ್ಕರಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ಚತುಷ್ಪಥ ಕಾಮಗಾರಿಯ ಜೊತೆ ಮಂಗಳೂರು ಬೆಂಗಳೂರು ನಡುವಿನ ಸಂಚಾರಕ್ಕೆ , ಸಂಚಾರ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲಿರುವ ಶಿರಾಡಿ ಘಾಟಿ ಸುರಂಗ ಮಾರ್ಗ ಯೋಜನೆಯನ್ನು ೧೫.000 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು . 23 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ 2023ಏಪ್ರಿಲ್ ಒಳಗಾಗಿ ಸಾದ್ಯತಾ ವರದಿ dpr ಅಂತಿಮಗೊಳಿಸಿ ಮೇ ತಿಂಗಳಲ್ಲಿ ಬಿಡ್ ಆಹ್ವಾನಿಸುವುದಾಗಿ ಸಚಿವ ನಿತಿನ್ ಗಟ್ಕರಿ ತಿಳಿಸಿದ್ದಾರೆ

ಅಲ್ಲದೆ ಸಕಲೇಶಪುರದಿಂದ ಮಾರಣ ಹಳ್ಳಿಯ ಭಾಗದ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಕೂಡಲೇ ದುರಸ್ತಿ ನಡೆಸಲು ನಿರ್ಧರಿಸಲಾಗಿದ್ದು ದುರಸ್ತಿ ಕಾಮಗಾರಿಗೆ 12 . 20 ಕೋಟಿ ಬಿಡ್ ಮೌಲ್ಯಮಾಪನ ಮಾಡಲಾಗುತ್ತಿದೆ . ಅಸ್ತಿತ್ವದಲ್ಲಿರುವ ರಸ್ತೆಯ ನಿರ್ವಣೆಗಾಗಿ ಗುತ್ತಿಗೆದಾರರು ಪ್ಯಾಚ್ ವರ್ಕ್ ನಡೆಸಲು ಮುಂದಾಗಿದ್ದಾರೆ ಎಂದು ಅವರಿಗೆ ಸಚಿವ ನಿತಿನ್ ಗಟ್ಕರಿ ಸಂಸದ ನಳಿನ್ ಕುಮಾರ್ ಕಟೀಲ್ಗೆ ಬರೆದ ಪಾತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ . ಈ ಹಿಂದೆ ಡಿಸೆಂಬರ್ 8ರಂದು ಸಂಸತ್ತಿನಲ್ಲಿ ನಿತಿನ್ ಗಟ್ಕರಿ ಅವರು ಸಂಸತ್ ನಲ್ಲಿ ನಳಿನ್ ಕುಮಾರ್ ಅವರ ಪ್ರಶ್ನೆಗೆ ಉತ್ತರಿಸುವಾಗ ಶಿರಾಡಿ ಘಾಟಿ ಸುರಂಗ ಮಾರ್ಗ ಕಾರ್ಯ ಸಾಧ್ಯವಲ್ಲ ಎಂದಿದ್ದರು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು