News Karnataka Kannada
Monday, April 29 2024
ಮಂಗಳೂರು

ಮಂಗಳೂರು: ದಕ್ಷಿಣ ಸಭಾಪ್ರಾಂತದ ನೂತನ ಬಿಷಪರಾಗಿ ರೈ.ರೆವೆ.ಹೇಮಚಂದ್ರ ಕುಮಾರ್ ರವರು ಆಯ್ಕೆ

Rev. Hemachandra Kumar has been elected as the new Bishop of Dakshina Sabha.
Photo Credit : News Kannada

ಮಂಗಳೂರು: ಸಿ.ಎಸ್.ಐ ಕರ್ನಾಟಕ ದಕ್ಷಿಣ ಸಭಾಪ್ರಾಂತದ ನೂತನ ಬಿಷಪರಾಗಿ ರೈ.ರೆವೆ.ಹೇಮಚಂದ್ರ ಕುಮಾರ್ ರವರು ಆಯ್ಕೆಯಾಗಿರುತ್ತಾರೆ.

ದಿನಾಂಕ 07/12/2022 ರಂದು ಸಿ.ಎಸ್.ಐ, ಶಾಂತಿ ಮಹಾದೇವಾಲಯದಲ್ಲಿ ನಡೆದ ಬಿಷಪ್ ದೀಕ್ಷೆ ಆರಾಧನೆಯಲ್ಲಿ ಚರ್ಚ್ ಆಫ್ ಸೌತ್ ಇಂಡಿಯಾದ ಮಹಾಧರ್ಮಾಧ್ಯಕ್ಷರಾದ (ಮೋಡರೇಟರ್) ದ. ಮೋಸ್ಟ್, ರೆವೆ.ಎ.ಧರ್ಮಾರಾಜ ರಸಲಾಂ ರವರು ರೆವೆ.ಹೇಮಚಂದ್ರ ಕುಮಾರ್ ರವರನ್ನು ಬಿಷಪರಾಗಿ ನೇಮಕ ಮಾಡಿದರು.

ಚರ್ಚ್ ಆಫ್ ಸೌತ್ ಇಂಡಿಯ ಚೆನ್ನ ಇಲ್ಲಿ ನಡೆದ ಸಿ.ಎಸ್.ಐ ಸಿನೋಡ್ ಕಾರ್ಯಕಾರಿ ಸಮಿತಿಯಲ್ಲಿ ಬಿಷಪರ ನೇಮಕ ಪ್ರಕ್ರಿಯೆ ನಡೆದು ರೆವೆ.ಹೇಮಚಂದ್ರ ಕುಮಾರ್ ರವರನ್ನು ಬಿಷಪರಾಗಿ ಆಯ್ಕೆ ಮಾಡಲಾಗಿತ್ತು. ಬಿಷಪ್ ದೀಕ್ಷೆ ಆರಾಧನ ಕಾರ್ಯಕ್ರಮದಲ್ಲಿ ಸಿ.ಎಸ್‌.ಐ ನ ಡೆಪ್ಯುಟಿ ಮೂಡರೇಟರ್ ರೈರೆವೆ.ಡಾ. ರೂಬೆನ್ ಮಾರ್ಕ್, ಸಿ.ಎಸ್.ಐ ಮಹಾ ಕಾರ್ಯದರ್ಶಿ ಅಡ್ವಕೇಟ್ ಸಿ.ಫೆರ್ನಾಂಡಿಸ್ ರತೀನರಾಜ, ಕೊಯಂಬತ್ತೂರ್ ಡಯಾಸಿಸ್ ಬಿಷಪ್ , ತಿಮೋಥಿ ರವಿಂದ‌, ಕೊಲ್ಲಂ -ಕೂಟ್ಟಾರಕರ ಡಯಾಸಿಸ್ ನ ಬಿಷಪ್ ರೈ.ರೆವೆ.ಡಾ.ಒಮ್ಮನ್ ಜಾರ್ಜ್, ಕರ್ನಾಟಕ ನಾರ್ಧನ್ ಡಯಾಸಿಸ್ ನ ಬಿಷಪ್ .ರವ.ಮಾರ್ಟಿನ್ ಸಿ ಬೋರ್ಗ್ಯ, ಮೋಡರೇಟರ್ಸ್ ಸೆಕ್ರೆಟರಿ ರೆವೆ. ರೋಹನ್ ಪುಷ್ಪರಾಜನ್ ಉಪಸ್ಥಿತರಿದ್ದರು.

ಬಿಷಪ್ ದೀಕ್ಷೆ ಆರಾಧನೆಯಲ್ಲಿ ಕರ್ನಾಟಕ ದಕ್ಷಿಣ ಸಭಾಪ್ರಾಂತದ ಪಧಾಧಿಕಾರಿಗಳು  ವಿಲಿಯಂ ಕೇರಿ -ಕಾರ್ಯದರ್ಶಿ, ರವ.ಸಿಸ್ಟರ್ ಸುಜಾತ -ಉಪಾಧ್ಯಕ್ಷೆ  ವಿನ್ಸೆಂಟ್, ಪಾಲನ್ನ-ಖಜಾಂಜಿ ಹಾಗೂ ಸಭಾಪಾಲಕರುಗಳು, ಸಭೆಗಳ ಸದಸ್ಯರುಗಳು ಭಾಗವಹಿಸಿ ನೂತನ ಬಿಷಪರಿಗೆ ಶುಭಾಶಯಗಳನ್ನು ಕೋರಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು