ಮಂಗಳೂರು: ಬಿಲ್ಲವರ ಪಾದಯಾತ್ರೆ ಹತ್ತಿಕ್ಕಲು ಸರಕಾರದ ಕಡೆಯಿಂದ ಸಾಕಷ್ಟು ಒತ್ತಡ, ಜೀವಬೆದರಿಕೆ ಇದೆ. ಆದರೆ ಅದಕ್ಕೆ ಜಗ್ಗದೆ ಪಾದಯಾತ್ರೆ ನಡೆಸಲಾಗುವುದು ಎಂದು ಕಲಬುರ್ಗಿ ಜಿಲ್ಲೆೆ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ ಪ್ರಣಾವನಂದ ಸ್ವಾಮೀಜಿ ಹೇಳಿದರು.
ಗುರುವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಾದಯಾತ್ರೆೆ ಯಾವುದೇ ಪಕ್ಷ, ಸರಕಾರದ ವಿರುದ್ಧವಲ್ಲ. ಸಮಾಜದ ನ್ಯಾಾಯಕ್ಕಾಾಗಿ. ಆದರೆ ಪಾದಯಾತ್ರೆ ತಡೆಯಲು ಆರೋಪ, ಷಡ್ಯಂತ್ರ ನಡೆಯುತ್ತಿದೆ. ಸರಕಾರದ ಭಾಗದಿಂದ ನನಗೆ ಜೀವಭಯವಿದೆ. ಆದರೆ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಹೇಳಿದರು.
ಬೆಳಗ್ಗೆೆ 10.30ಕ್ಕೆೆ ಕುದ್ರೋಳಿ ದೇವಸ್ಥಾಾನದಲ್ಲಿ ಸಭೆ ನಡೆಯಲಿದೆ. ಅನಂತರ ಮಧ್ಯಾಹ್ನ 1 ಕ್ಕೆೆ ಕುದ್ರೋಳಿ ದೇವಸ್ಥಾಾನದಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. 40 ದಿನಗಳಲ್ಲಿ ಬೆಂಗಳೂರಿಗೆ 658 ಕಿ.ಮೀ ಸಾಗಲಿದೆ. ಬಿಲ್ಲವರ ನಿಗಮ ಘೋಷಣೆಯಾಗಬೇಕು, ಗರೋಡಿಗಳ ಭೂಮಿ ಗರೋಡಿ ಸಮಿತಿಯವರಿಗೆ ಸಿಗಬೇಕು ಮೊದಲಾದ 10 ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ಪಾದಯಾತ್ರೆ ನಡೆಸುತ್ತಿದ್ದೇವೆ. ರಾಜಕೀಯ ಪಕ್ಷ ಅಥವಾ ನಾಯಕರಿಂದ ದೇಣಿಗೆ ಪಡೆದಿಲ್ಲ. ಪಾದಯಾತ್ರೆಗೆ ಒಂದೂವರೆ ಕೋಟಿ ರೂ. ಖರ್ಚಾಗಲಿದ್ದು ಜಿಲ್ಲಾ ಸಮಿತಿಗಳು ಸಮುದಾಯದವರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.