ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ವಾಟ್ಸಪ್ ಚಾಟಿಂಗ್ ಮೂಲಕ ಆತಂಕಕ್ಕೆ ಕಾರಣವಾಗಿದ್ದ ಯುವಕ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂಡಿಗೋ ವಿಮಾನ ಸಂಸ್ಥೆಯ ಮ್ಯಾನೇಜರ್ ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣದ ದಾಖಲಿಸಿದ್ದಾರೆ.
ಉತ್ತರಪ್ರದೇಶದ ಮೂಲದ ದೀಪಯಾನ್ ಮಾಜಿ (23) ಮತ್ತು ಸಿಮ್ರನ್ ಟಾಮ್ (23) ಪೋಲಿಸರು ವಶಕ್ಕೆ ಪಡೆದ ಯುವಕ ಮತ್ತು ಯುವತಿ.
ಇವರಿಬ್ಬರ ಕೂಡ ಹಿಂದೆ ಮಣಿಪಾಲದಲ್ಲಿ ಐಐಟಿ ಕಲಿತಿದ್ದು ಕ್ಲಾಸ್ ಮೆಟ್ ಎನ್ನಲಾಗುತ್ತಿದೆ . ದೀಪಯಾನ್ ಮಾಜಿ ಗುಜರಾತಿನ ವಡೋದರದಲ್ಲಿ ಎಲ್ ಎಂಡ್ ಟಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಗಿಟ್ಟಿಸಿದ್ದಾನೆ 2ದಿನಗಳ ಹಿಂದೆ ಮಣಿಪಾಲಕ್ಕೆ ಬಂದು ಭಾನುವಾರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಹಿಂತಿರುಗುತ್ತಿದ್ದರು ದೀಪಯಾನ್ ಮುಂಬೈಗೆ ಹೊರಟಿದ್ದರೆ ಯುವತಿ ಬೆಂಗಳೂರಿಗೆ ಹೊರಟಿದ್ದ ಭಾನುವಾರ ಬೆಳಿಗ್ಗೆ 11 ಗಂಟೆಗೆ ಇಂಡಿಗೋ ವಿಮಾನದಲ್ಲಿ ದೀಪಯಾನ್ ಮುಂಬೈಗೆ ಹೊರಟಿದ್ದ ಇದೇ ವೇಳೆ ಹೊರಗಡೆ ವಿಮಾನಕ್ಕಾಗಿ ಕಾಯುತ್ತಿದ್ದ ಸಿಮ್ರಾನ್ ಟಾಮ್ ಆತನನ್ನು ಗಮನಿಸಿ ಮೆಸೇಜ್ ಚಾಟ್ ಮಾಡುತ್ತಿದ್ದಳು .
ಸಂಭಾಷಣೆಯ ನಡುವೆ ಯು ಆರ್ ದಿ ಬಾಂಬರ್ ಎಂದು ಯುವತಿ ಸಿಮ್ರಾನ್ ದೀಪಯಾನ್ ಗೆ ಮೆಸೇಜ್ ಮಾಡಿದ್ದಳು ಯುವಕನ ಮೊಬೈಲ್ ಚಾಟಿಂಗ್ ಅನ್ನು ಗಮನಿಸಿದ ಹಿಂದಿನ ಸೀಟಿನಲ್ಲಿದ್ದ ಮಹಿಳೆಯೊಬ್ಬರು ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ಆತಂಕಕ್ಕೆ ಒಳಗಾದ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಟೇಕಾಫ್ ರೆಡಿಯಾಗಿದ್ದ ವಿಮಾನವನ್ನು ಸ್ಥಗಿತಗೊಳಿಸಿ ತಪಾಸಣೆ ನಡೆಸಿದ್ದರು.
ವಿಮಾನವನ್ನು ಹಳೆ ಏರ್ಪೋಟಿಗೆ ಕರೆದೊಯ್ದು ಅಲ್ಲಿ ಕುಲಂಕುಶ ತಪಾಸಣೆ ನಡೆಸಿದ ಬಳಿಕ ಸಂಜೆ 5ಗಂಟೆಗೆ ಪ್ರಯಾಣಕ್ಕೆ ಅನುಮತಿ ನೀಡಲಾಗಿತ್ತು ಬಳಿಕ 186 ಪ್ರಯಾಣಿಕರನ್ನು ಹೊತ್ತಿದ್ದ ವಿಮಾನ ಸಾವಧಾನದಿಂದ ಹೊರಟಿತ್ತು .ಆದರೆ ಯುವಕ ಯುವತಿಯನ್ನು ಸಿಐಎಎಫ್ ಭದ್ರತಾ ಸಿಬ್ಬಂದಿ ತೀವ್ರ ವಿಚಾರಣೆ ನಡೆಸಿದ್ದು ಕೊನೆಗೆ ಬಜ್ಪೆ ಪೊಲೀಸರ ವಶಕ್ಕೆ ನೀಡಿದ್ದಾರೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಭದ್ರತೆಗೆ ಆತಂಕವೊಡ್ಡುವ ರೀತಿಯ ಮೆಸೆಜ್ ಮಾಡಿರುವುದರ ಹಿನ್ನಲೆ ಏನು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಯುವತಿ ತಮಾಷೆಗೆ ಮೆಸೆಜ್ ಮಾಡಿದ್ದೆ ಎಂದಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಗಾಗಿ ತಮ್ಮ ವಶಕ್ಕೆ ಪಡೆದಿದ್ದಾರೆ ಯುವಕ ಯುವತಿ ಇಬ್ಬರು ಕೂಡ ಐಐಟಿ ಕಲಿತವರಾಗಿದ್ದು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಈ ರೀತಿ ಮೆಸೇಜ್ ಮಾಡಿರೋದು ಸಹಜವಾಗಿಯೇ ಆತಂಕ ಮೂಡಿಸಿದೆ.