ಮಂಗಳೂರು: ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಕೋಟಿಗಟ್ಟಲೆ ಹಣವನ್ನು ತಂದು ಮಂಗಳೂರು ನಗರವನ್ನು ಸುಂದರವಾಗಿ ಸುಂದರೀಕರಣಗೊಳಿಸಲು ಆಗುತ್ತಿದೆ ಆದರೆ ಹೊಂಡ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ.
ಕಾರಿನಲ್ಲಿ ಸಂಚಾರ ಮಾಡುವವರಿಗೆ ಬೈಕಿನ ಸವಾರ ಕಷ್ಟ ಹೇಗೆ ಗೊತ್ತಾಗಬೇಕು ನಗರದಲ್ಲಿ ಎಲ್ಲಿ ನೋಡಿದರಲ್ಲಿ ಹೊಂಡ ಗುಂಡಿ ಇಲ್ಲದ ರಸ್ತೆಯೇ ಇಲ್ಲ , ಸಾರ್ವಜನಿಕರು ಹಲವು ಬಾರಿ ಪ್ರತಿಭಟನೆ ಮಾಡಿದರೂ ಅದಕ್ಕೆ ಮುಕ್ತಿ ಸಿಗುವುದು ದೂರದ ಮಾತೇ ಆಗಿದೆ ಆದರೆ ಮಂಗಳೂರಿನಲ್ಲಿ ಶಾಲೆಗೆ ತೆರಳುವ ಪುಟ್ಟ ಬಾಲಕನೊಬ್ಬ ರಸ್ತೆ ಪಕ್ಕ ಬಿದ್ದ ಗುಂಡಿಗಳನ್ನು ಮುಚ್ಚಲು ಯತ್ನ ಕೈಲಾಗದ ಪ್ರಯತ್ನ ಮಾಡಿದ್ದಾನೆ.
ಈತ ರಸ್ತೆ ಪಕ್ಕದಲ್ಲಿ ಇರುವ ಚಿಕ್ಕ ಚಿಕ್ಕ ಕಲ್ಲುಗಳನ್ನು ಹೆಕ್ಕಿ ತಂದು ಅದನ್ನು ಹೊಂಡಕ್ಕೆ ಹಾಕುವ ವಿಡಿಯೋವನ್ನು ಸಾರ್ವಜನಿಕರೊಬ್ಬರು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ ಇದೀಗ ಭಾರೀ ವೈರಲ್ ಆಗಿದೆ.
ಅಂದ್ಹಾಗೆ ಮಂಗಳೂರಿನ ಕಂಕನಾಡಿ ಹೂವಿನ ಮಾರುಕಟ್ಟೆ ಬಳಿ ಕಾಂಕ್ರೀಟ್ ರಸ್ತೆ ಅಂಚಿನಲ್ಲಿ ದೊಡ್ಡ ಹೊಂಡವಾಗಿದ್ದು ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲು ಮುರಿದುಕೊಂಡ ಕಂಡ ವಿದ್ಯಾರ್ಥಿ ಚಿಕ್ಕ ಚಿಕ್ಕ ಕಲ್ಲುಗಳನ್ನು ತಂದು ಹೊಂಡ ಮುಚ್ಚಲು ಪ್ರಯತ್ನಿಸುತ್ತಿದ್ದಾನೆ ರಸ್ತೆಯ ಹೊಂಡದಲ್ಲಿ ಬೈಕುಗಳು ನಿಯಂತ್ರಣ ತಪ್ಪಿ ಬೀಳುತ್ತಿವೆ ಅದನ್ನು ತಡೆಯಲು ಪಕ್ಕದಿಂದ ಸಣ್ಣ ಕಲ್ಲುಗಳನ್ನು ಹೆಕ್ಕಿ ತಂದು ದೊಡ್ಡ ಹೊಂಡ ಮುಚ್ಚುವ ಪ್ರಯತ್ನ ಮಾಡುತ್ತಿದ್ದೇನೆ ಹೊಂಡಗಳಿಂದ ಅಪಘಾತ ಸಂಭವಿಸಬಾರದೆಂಬ ಬಾಲಕ ಹೇಳಿದ್ದಾರೆ.
ಒಟ್ಟಾರೆ ಬಾಲಕ ಸಮಯಪ್ರಜ್ಞೆ ಕಾಳಜಿಗೆ ಸಾರ್ವಜನಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ