News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಟೈಲರಿಂಗ್ ವೃತ್ತಿಯ ಕಾರ್ಮಿಕರ ಆಶೋತ್ತರಗಳನ್ನು ಈಡೇರಿಸಲು ನಮ್ಮ ಸರಕಾರ ಬದ್ಧ

Mangaluru: Our government is committed to fulfil the aspirations of the tailoring workers.
Photo Credit : News Kannada

ಮಂಗಳೂರು: ಟೈಲರಿಂಗ್ ವೃತ್ತಿಯ ಕಾರ್ಮಿಕರ ಆಶೋತ್ತರಗಳನ್ನು ಈಡೇರಿಸಲು ನಮ್ಮ ಸರಕಾರ ಬದ್ಧವಾಗಿದ್ದು, ಶಾಸಕನ ನೆಲೆಯಲ್ಲಿ ಕಾರ್ಮಿಕರ ಹಾಗೂ ಸರಕಾರದ ನಡುವಿನ ಸೇತುವೆಯಂತೆ ಕೆಲಸ ಮಾಡುತ್ತೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಘದ ಪ್ರಮುಖರು ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ‌ ಶಾಸಕ ಕಾಮತ್, ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಘವು ಅನೇಕ ಬಡ ಕಾರ್ಮಿಕರ ಏಳಿಗೆಗೆ ಸಾಕಷ್ಟು ಬೆಂಬಲ‌ ನೀಡಲಾಗುತ್ತಿದೆ. ಗ್ರಾಮೀಣ ಮಟ್ಟದ ಅದೆಷ್ಟೋ ಬಡ ಕುಟುಂಬಗಳು ಇಂದಿಗೂ ಟೈಲರಿಂಗ್ ವೃತ್ತಿಯನ್ನು ಅವಲಂಬಿಸಿದೆ. ಅಂತಹ ಕುಟುಂಬಗಳ ಏಳಿಗೆಗಾಗಿ ಸಂಘವು ಸರಕಾರದ ಸವಲತ್ತುಗಳನ್ನು ಪಡೆಯಲು ಸಹಕಾರ ನೀಡುವ ಕೆಲಸ ಮಾಡುತ್ತಿದೆ ಎಂದು ಸಂಘದ ಚಟುವಟಿಕೆಗಳ ಕುರಿತು ಶ್ಲಾಘಿಸಿದರು.

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ರಾಜ್ಯ ಅಧ್ಯಕ್ಷರಾದ ಬಿ.ಎ ನಾರಾಯಣ ಮಾತನಾಡಿ, ಜನಪರ ಕಾಳಜಿಯುಳ್ಳ ಶಾಸಕರಾಗಿರುವ ವೇದವ್ಯಾಸ್ ಕಾಮತ್ ಅವರು ನಮ್ಮ ಸಂಘದ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸುತ್ತಾರೆ. ಬಡ ಕಾರ್ಮಿಕರ ಸಮಸ್ಯೆಗಳನ್ನು ಮನಗಂಡ ಶಾಸಕರು ಈಗಾಗಲೇ 25 ಹೊಲಿಗೆ ಯಂತ್ರಗಳನ್ನು ನಮ್ಮ ಸಂಘದ ಮೂಲಕ ಒದಗಿಸಿದ್ದಾರೆ. ಸಂಘದ ಬೇಡಿಕೆಯಂತೆ ಈಗಾಗಲೇ 5 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಿದ್ದು, ಹೆಚ್ಚುವರಿ 5 ಲಕ್ಷಗಳ ಬೇಡಿಕೆಯನ್ನು ಪೂರೈಸುವ ಭರವಸೆ ನೀಡಿರುವುದು ಅವರಿಗಿರುವ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಅಸೋಸಿಯೇಷನ್ ಮೂಲಕ ಬಡ ಕುಟುಂಬಗಳಿಗೆ ಸಾಕಷ್ಟು ಆಹಾರ ಸಾಮಾಗ್ರಿಗಳ‌ ಕಿಟ್ ಒದಗಿಸಿದ್ದು, ಅವರೊಂದಿಗೆ ಸಂಘದ ಪ್ರತಿ ಸದಸ್ಯರು ಸದಾ ಇರುತ್ತೇವೆ ಎಂದು ಹೇಳಿದರು.

ಮೆರವಣಿಗೆಯ ಮೂಲಕ ಬರಮಾಡಿಕೊಂಡ ಸಂಘದ ಪ್ರಮುಖರು ಅಸೋಸಿಯೇಷನ್ ರಾಜ್ಯ ಹಾಗೂ ವಲಯಗಳ ಪ್ರಮುಖರು ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೆ.ಎಸ್.ಟಿ.ಎ ಕ್ಷೇತ್ರ ಅಧ್ಯಕ್ಷರಾದ ವಿದ್ಯಾ ಶೆಟ್ಟಿ ಅವರು ಕಾರೇಯಕ್ರಮದ ಅಧೇಯಕ್ಷತೆ ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ದಕ್ಷಿಣ ಕನ್ನಡ‌ಜಿಲ್ಲಾ ಅಧ್ಯಕ್ಷರಾದ ಜಯಂತ್ ಪುತ್ತೂರು, ಮಂಗಳೂರು ನಗರ ಸಮಿತಿ ಅಧ್ಯಕ್ಷೆ ಪ್ರಭಾ ಮಾಲಿನಿ, ಕೇಶವ ಕದ್ರಿ, ಶಶಿಕಲಾ ಬರ್ಕೆ, ಪ್ರಕಾಶ್ ಪೆರ್ಮಂಕಿ, ಹರೀಶ್ ರೈ, ಚಂದ್ರಹಾಸ, ಕ್ಷೇತ್ರ ಸಮಿತಿಯ ಒಂಬತ್ತು ವಲಯಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ,ಕೋಶಾಧಿಕಾರಿ ಹಾಗೂ ಸರ್ವ‌ ಸದಸ್ಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು