News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಸಚಿವರಿಂದ ಕಡಲ್ಕೊರೆತದ ಸ್ಥಳ ಪರಿಶೀಲನೆ

Minister inspects site of sea erosion
Photo Credit : News Kannada

ಮಂಗಳೂರು:  ಉಚ್ಚಿಲದಲ್ಲಿ ಕಡಲ್ಕೊರೆತ ಆಗಿ ಮೀನುಗಾರರ ಮನೆಗಳು ಬಿದ್ದಿವೆ ಸಮುದ್ರಕ್ಕೆ ತಡೆಗೋಡೆ ನಿರ್ಮಾಣ ಸಂಬಂಧ ಸಿಎಂ ಜೊತೆ ಮಾತನಾಡ್ತೇನೆ.ಸಮುದ್ರ ಕೊರೆತ ನಿಲ್ಲಿಸದೇ ಇದ್ರೆ ಇನ್ನೂ ಮುಂದೆ ಹೋಗ್ತದೆ. ಮತ್ತೊಮ್ಮೆ ಇಲ್ಲಿ ತಜ್ಞರ ಸಮಿತಿ ಮೂಲಕ ಸಮೀಕ್ಷೆ ಮಾಡ್ತೇವೆ.  ಎಂದು  ಕಂದಾಯ ಸಚಿವ ಆರ್.ಅಶೋಕ್  ಹೇಳಿದರು.

ಮಂಗಳೂರಿನ ಬಟ್ಟಪಾಡೆ, ಉಚ್ಚಿಲದಲ್ಲಿ ಕಡಲ್ಕೊರೆತದ ಸ್ಥಳ ಪರಿಶೀಲನೆ ಸಂಧರ್ಭದಲ್ಲಿ ಮಾತನಾಡುತ್ತಾ ರಾಜ್ಯದಲ್ಲಿ ಬಹಳಷ್ಟು ಹಾನಿಯಾಗಿದ್ದು, ಏಳು ಜಿಲ್ಲೆಗಳಲ್ಲಿ ಸಮಸ್ಯೆ ಆಗಿದೆ.ಪೂರ್ತಿ ಮನೆ ಬಿದ್ರೆ ಐದು ಲಕ್ಷ ಪರಿಹಾರ ಕೊಡುವ ಆದೇಶಕ್ಕೆ ಬೆಂಗಳೂರಿಗೆ ಹೋಗಿ ಸಹಿ ಮಾಡ್ತೇನೆ. ಎನ್ ಡಿಆರ್ ಎಫ್ ನಿಯಮದ ಪ್ರಕಾರ 95 ಸಾವಿರ ಇತ್ತು, ಸಿಎಂ ಜೊತೆ ಮಾತನಾಡಿ ಐದು ಲಕ್ಷ ಮಾಡಿದ್ದೇವೆ. ಬಂಟ್ವಾಳದ ಪಂಜಿಕಲ್ಲು ಗುಡ್ಡ ಕುಸಿತದ ಮೃತರಿಗೆ ಐದು ಲಕ್ಷ ಪರಿಹಾರ ಕೊಡ್ತೇವೆ. ಅವರು ಕೇರಳದವರು, ಇಲ್ಲಿ ಕೆಲಸಕ್ಕಾಗಿ ಬಂದಿದ್ದಾರೆ. ಭೂ ಕುಸಿತ ಆದ ಜಾಗದ ಜನರನ್ನ ಸ್ಥಳಾಂತರಿಸಲು ಡಿಸಿಗಳಿಗೆ ಸೂಚಿಸಿದ್ದೇನೆ.ಎಲ್ಲಾ ಅಧಿಕಾರಿಗಳು ರಜೆ ಹಾಕದೇ ಕೆಲಸ ಮಾಡಲು ಸೂಚಿಸಿದ್ದೇನೆ ಎಂದು ಹೇಳಿದರು.

ಕಡಲ ಕೊರೆತಕ್ಕೆ ಒಳಗಾಗಿರುವ ಉಳ್ಳಾಲದ ಬಟ್ಪಪಾಡೆ ಸ್ಥಳಕ್ಕೆ ಕಂದಾಯ ಸಚಿವರಾದ ಆರ್.ಅಶೋಕ್, ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್, ಬಂದರು, ಮೀನುಗಾರಿಕೆ ಜಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಹಾಗೂ ಕಂದಾಯ ಅಧಿಕಾರಿಗಳು ಜುಲೈ 7ರ ಗುರುವಾರ ಭೇಟಿ ನೀಡಿ ಕಡಲ್ಕೊರೆತಲ್ಕೊಳಹಾದ ಸ್ಥಳವನ್ನು ಪರಿಶೀಲನೆ ಮಾಡಿದರು.

ಸ್ಥಳೀಯರೊಂದಿಗೆ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ನಂತರ ಉಳ್ಳಾಲಕ್ಕೆ ತೆರಳಿ ಕಡಲ ಕೊರೆತಕ್ಕೆ ಒಳಗಾದ ಪ್ರದೇಶಗಳನ್ನು ಪರಿಶೀಲಿಸಿದರು.

ಈ ವೇಳೆ ದ.ಕ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಗೆ ಮೀನುಗಾರರರು ಸಮುದ್ರಕ್ಕೆ ಕಲ್ಲು ಹಾಕಿ ಕಡಲ್ಕೊರೆತ ನಿಯಂತ್ರಿಸಲು ಮನವಿ ಮಾಡಿದರು. ಆದರೆ ಕೇವಲ ರೆಸಾರ್ಟ್ ಗಳನ್ನ ರಕ್ಷಿಸಲು ಕಲ್ಲು ಹಾಕಿತ್ತಿದ್ದಾರೆ ಅಂತ ಆಕ್ರೋಶ  ವ್ಯಕ್ತಪಡಿಸಿ,ಅತೀ ಹೆಚ್ಚು ಕಡಲ್ಕೊರೆತ ಪೀಡಿತ ಜಾಗಗಳಲ್ಲಿ ತಡೆಗೋಡೆ ಕಾಮಗಾರಿ ನಡೆಸಿಲ್ಲ. ಎಂದು ಸಚಿವ ಸುನೀಲ್ ಕುಮಾರ್ ಮತ್ತು ಅಂಗಾರ ಬಳಿ ಆಳಲು.ವ್ಯಕ್ತಪಡಿಸಿದರು.

ಉಚ್ಚಿಲದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ “ತಜ್ಞರ ವರದಿ ಪಡೆದು ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಮಾಡುತ್ತೇವೆ, ಸಚಿವರು ಮತ್ತು ಅಧಿಕಾರಿಗಳ ಜೊತೆ ಕೂತು ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ನಮ್ಮ ಮೊದಲ ಆದ್ಯತೆ ವಾಸದ ಮನೆಗಳಿಗೆ ರಕ್ಷಣೆ ಕೊಡುವುದು ರೆಸಾರ್ಟ್ ಗಳಿಗೆ ನಮ್ಮ ಆದ್ಯತೆ ಅಲ್ಲ, ವಾಸದ ಮನೆ ಮುಖ್ಯ.ಅಲ್ಲಿಗೆ ತುರ್ತು ಪರಿಹಾರ ‌ಮತ್ತು ಶಾಶ್ವತ ಪರಿಹಾರ ಮಾಡ್ತೇವೆ.ಮೂರೂ ಜಿಲ್ಲೆಯ ಸಚಿವರು ಸಿಎಂ ಭೇಟಿಯಾಗಿ ಚರ್ಚೆ ಮಾಡ್ತೇವೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು