ಮಂಗಳೂರು: ಇಂಡಿಯನ್ ಡೆಂಟಲ್ ಅಸೋಸಿಯೇಷನ್ ದಕ್ಷಿಣ ಕನ್ನಡ ಬ್ರಾಂಚ್ ಇದರ ವತಿಯಿಂದ ಒಂದುದಿನದ ದಂತ ವೈದ್ಯಕೀಯ ಕಾರ್ಯಾಗಾರವನ್ನು ಮಂಗಳೂರಿನ ಹೋಟೆಲ್ ಮಾಯಾ ಇಂಟರ್ನ್ಯಾಷನಲ್ ನಲ್ಲಿ ದಿನಾಂಕ 28 ಜನವರಿ ಶನಿವಾರದಂದು ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಇಂಡಿಯನ್ ಡೆಂಟಲ್ ಅಸೋಸಿಯೇಷನ್ ನ ಅಧ್ಯಕ್ಷರಾದ ಮಣಿಪಾಲ ಕಾಲೇಜು ಓಫ್ ಡೆಂಟಲ್ ಸೈನ್ಸಸ್ ನ ಉಪ ಪ್ರಾಂಶುಪಾಲರಾದ ಡಾ.ಜುನೈದ್ ಅಹ್ಮದ್ ರವರು ಉದ್ಘಾಟಿಸಿದರು.
ಈ ಕಾರ್ಯಕ್ರಮವನ್ನು ಮುಂಬೈ ಯ ಖ್ಯಾತ ದಂತ ವೈದ್ಯರಾದ ಡಾ.ಸಂತೋಷ್ ರವೀಂದ್ರನ್ ರವರು ನಡೆಸಿ ಕೊಟ್ಟರು. ಇಂಡಿಯನ್ ಡೆಂಟಲ್ ಅಸೋಸಿಯೇಷನ್ ದಕ್ಷಿಣ ಕನ್ನಡ ಬ್ರಾಂಚ್ ನ ಕಾರ್ಯದರ್ಶಿ ಏ ಜೆ ಡೆಂಟಲ್ ಕಾಲೇಜ್ ನ ಡಾ.ಭರತ್ ಪ್ರಭು ಹಾಗು ಖಜಾಂಚಿ ನಗರದ ದಂತ ವೈದ್ಯರಾದ ಡಾ.ಪ್ರಸನ್ನ ಕುಮಾರ್ ರಾವ್ ಹಾಗು ಸಿ ಡಿ ಈ ಮುಖ್ಯಸ್ಥೆ ನಂದಿತಾ ಸುಜೀರ್ ರವರು ಉಪಸ್ಥಿತರಿದ್ಧರು.