ಮಂಗಳೂರು: ಸಫಾಯಿ ಕರ್ಮಚಾರಿಗಳ ಬಾಕಿ ಇರುವ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಂಗಳೂರಿನಲ್ಲಿ ಸಫಾಯಿ ಕಾರ್ಮಿಕರು ಮುಷ್ಕರ ನಿರತರಾಗಿದ್ದಾರೆ.
ಸಫಾಯಿ ಕರ್ಮಚಾರಿಗಳ ಬಾಕಿ ಇರುವ ಬೋನಸ್ ವಿತರಣೆ ಮಾಡಬೇಕು, ಸಂಕಷ್ಟ ಭತ್ಯೆ ನೀಡಬೇಕು, ಉಪಹಾರ ಭತ್ಯೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸ್ಫಾಯಿ ಕರ್ಮಚಾರಿಗಳ ಸಂಘ ಮುಂದಿಟ್ಟಿದೆ.
ಕಳೆದ ಜುಲೈ ೧ರಿಂದ ೪ರವರೆಗೆ ಮುಷ್ಕರ ನಡೆದಾಗ ಆಂಟನಿ ಸಂಸ್ಥೆಯ ಯೋಜನಾ ಮುಖ್ಯಸ್ಥರಾದ ಪ್ರಕಾಶ್ ಅವರು ಬಾಕಿ ಇರುವ ಬೋನಸ್ಸನ್ನು ನೀಡುವುದಾಗಿ ಜಿಲ್ಲಾಧಿಕಾರಿಗಳ ಎದುರು ಭರವಸೆ ನೀಡಿದ್ದರು. ಆ ಮೊತ್ತವನ್ನು ಇನ್ನೂ ನೀಡಿಲ್ಲ. ೨೦೧೪ರಿಂದ ವೇತನ ಪರಿಷ್ಕರಣೆ ಆಗಿಲ್ಲ.
ಕನಿಷ್ಟ ವೇತನವನ್ನು ಪರಿಷ್ಕರಿಸಲಾಗಿಲ್ಲ ಎಂದಿರುವ ಕರ್ಮಚಾರಿಗಳು ಸೋಮವಾರದಿಂದ ಕಸ ತೆರವು ಮಾಡುವುದನ್ನು ಸ್ಥಗಿತಗೊಳಿಸಿ ಮುಷ್ಕರ ನಿರತರಾಗಿದ್ದಾರೆ.