News Karnataka Kannada
Thursday, May 09 2024
ಮಂಗಳೂರು

ಮಂಗಳೂರು: ಕಸ ತೆರವು ಸ್ಥಗಿತ, ಬೇಡಿಕೆ ಈಡೇರಿಸಲು ಆಗ್ರಹ

Mangaluru: Garbage disposal stopped, demands to be met
Photo Credit : News Kannada

ಮಂಗಳೂರು: ಸಫಾಯಿ ಕರ್ಮಚಾರಿಗಳ ಬಾಕಿ ಇರುವ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮಂಗಳೂರಿನಲ್ಲಿ ಸಫಾಯಿ ಕಾರ್ಮಿಕರು ಮುಷ್ಕರ ನಿರತರಾಗಿದ್ದಾರೆ.

ಸಫಾಯಿ ಕರ್ಮಚಾರಿಗಳ ಬಾಕಿ ಇರುವ ಬೋನಸ್ ವಿತರಣೆ ಮಾಡಬೇಕು, ಸಂಕಷ್ಟ ಭತ್ಯೆ ನೀಡಬೇಕು, ಉಪಹಾರ ಭತ್ಯೆ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸ್ಫಾಯಿ ಕರ್ಮಚಾರಿಗಳ ಸಂಘ ಮುಂದಿಟ್ಟಿದೆ.

ಕಳೆದ ಜುಲೈ ೧ರಿಂದ ೪ರವರೆಗೆ ಮುಷ್ಕರ ನಡೆದಾಗ ಆಂಟನಿ ಸಂಸ್ಥೆಯ ಯೋಜನಾ ಮುಖ್ಯಸ್ಥರಾದ ಪ್ರಕಾಶ್ ಅವರು ಬಾಕಿ ಇರುವ ಬೋನಸ್ಸನ್ನು ನೀಡುವುದಾಗಿ ಜಿಲ್ಲಾಧಿಕಾರಿಗಳ ಎದುರು ಭರವಸೆ ನೀಡಿದ್ದರು. ಆ ಮೊತ್ತವನ್ನು ಇನ್ನೂ ನೀಡಿಲ್ಲ. ೨೦೧೪ರಿಂದ ವೇತನ ಪರಿಷ್ಕರಣೆ ಆಗಿಲ್ಲ.

ಕನಿಷ್ಟ ವೇತನವನ್ನು ಪರಿಷ್ಕರಿಸಲಾಗಿಲ್ಲ ಎಂದಿರುವ ಕರ್ಮಚಾರಿಗಳು ಸೋಮವಾರದಿಂದ ಕಸ ತೆರವು ಮಾಡುವುದನ್ನು ಸ್ಥಗಿತಗೊಳಿಸಿ ಮುಷ್ಕರ ನಿರತರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು