ಮಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ 2023 ಫೆಬ್ರವರಿ 25 ಮತ್ತು 26ರಂದು ಕ್ರಮವಾಗಿ ‘ಬಿಷನ್-2023’ ಹಾಗೂ ‘ಸಾನಿಧ್ಯ ಉತ್ಸವ’ ಕಾರ್ಯಕ್ರಮ ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಭಿನ್ನ ಸಾಮರ್ಥ್ಯದ ಮಕ್ಕಳು ತಮ್ಮ ತರಬೇತಿದಾರರೊಡನೆ ಸೇರಿಕೊಂಡು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ “ವಿಷನ್ 2023 ಫೆಬ್ರವರಿ ತಿಂಗಳ 25ನೇ ತಾರೀಕು ಸಂಜೆ ೦೫ 30ಕ್ಕೆ ಪ್ರಾರಂಭಗೊಳ್ಳಲಿದೆ.
“ವಿಷನ್ 2023 ನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿರುವ ಡಾ. ಕುಮಾರ ಭಾಆಪ ಇವರು ಉದ್ಘಾಟಿಸಲಿರುವರು. ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶ್ರೀ ಗೋಪಾಲಕೃಷ್ಣ ದಕ್ಷಿಣ ಕನ್ನಡ ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷರಾಗಿರುವ ಶ್ರೀ ಜಯಶೀಲ ಅಡ್ಯಂತಾಯ ಭಾಗವಹಿಸಲಿದ್ದಾರೆ.
2023 ಫೆಬ್ರವರಿ 26ನೇ ಆದಿತ್ಯವಾರ ಗಂಟೆ 5.00ಕ್ಕೆ ಕದ್ರಿ ಉದ್ಯಾನದಲ್ಲಿ ಸಾನಿಧ್ಯ ವಿಶೇಷ ಮಕ್ಕಳ ಸಾಂಸ್ಕೃತಿಕ ಪ್ರತಿಭೆಯನ್ನು ತೋರಿಸುವ ಕಾರ್ಯಕ್ರಮ ಸಾನಿಧ್ಯ ಉತ್ಸವ ಜರುಗಲಿದೆ. ಕಾರ್ಯಕ್ರಮವನ್ನ ಗಣ್ಯಾತಿ ಗಣ್ಯರು ಉದ್ಘಾಟಿಸಲಿದ್ದರೆ ಎಂದು ಸಂಘಟಕರಾದ ವಸಂತ್ ಕುಮಾರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದರು