ಮಂಗಳೂರು: ಕಳೆದ 31 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ವಾಹನ ಚಾಲಕ ಹಾಗೂ ಹಿರಿಯ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಕೆ. ಪೂವಪ್ಪ ಅವರು ಜೂ.30ರ ಶುಕ್ರವಾರ ವಯೋನಿವೃತ್ತಿ ಹೊಂದಿದರು.
ಈ ಸಂದರ್ಭದಲ್ಲಿ ಪೂವಪ್ಪ ಹಾಗೂ ಅವರ ಧರ್ಮಪತ್ನಿ ಪುಣ್ಯವತಿ ಅವರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸನ್ಮಾನಿಸಿ, ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕವಿರಾಜ್ ಎಚ್.ಜಿ., ಪ್ರಥಮ ದರ್ಜೆ ಸಹಾಯಕ ರಾಜು ಬೋವಿ, ಸಿಬ್ಬಂದಿಗಳಾದ ವೇಣುಗೋಪಾಲ್, ವಿಶ್ವನಾಥ ಜೋಗಿ, ದಿವ್ಯ, ಕಲಾವಿದರಾದ ಗಿರೀಶ್ ನಾವುಡ, ನಿವೃತ್ತ ನೌಕರರಾದ ಸಾವಂತರು, ಟ್ರೈನಿಗಳಾದ ಪೂರ್ಣಿಮಾ, ಅಶ್ವಿತಾ ಹಾಗೂ ಇತರರು ಭಾಗವಹಿಸಿದ್ದರು.