ಮಂಗಳೂರು: ಅಖಿಲ ಭಾರತ ಮಟ್ಟದ ಸಿಐಟಿಯು ಕಾರ್ಮಿಕ ಸಂಘಟನೆಯ ಮಹಾಧಿವೇಶನವು ಮುಂಬರುವ ಜನವರಿ ತಿಂಗಳಲ್ಲಿ ಬೆಂಗಳೂರಲ್ಲಿ ಜರುಗಲಿದ್ದು ಇದಕ್ಕೆ ಪೂರ್ವಭಾವಿಯಾಗಿ ರಾಜದಾಧ್ಯಂತ ಸ್ಥಳೀಯ ಮಟ್ಟದ ಸ್ವಾಗತ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಅದರನ್ವಯ ದೇರೆಬೈಲ್ ಸಂಕೇಶ ಪ್ರದೇಶ ವ್ಯಾಪ್ತಿಯ ಕಟ್ಟಡ ಕಾರ್ಮಿಕ ಸಂಘದ ಕಾರ್ಯಕರ್ತರುಗಳ ಸಭೆ ದಿನಾಂಕ 07-11-2022ರಂದು ಜರುಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷರಾಗಿ ರುದ್ರಪ್ಪ ಲಿಂಗಪ್ಪ ಕಡಕೋಳ ಇವರು ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಶರಣಪ್ಪ ಕಟ್ಟಿಮನಿ, ಮಲ್ಲಪ್ಪ ಕುರಿ, ವಿಜೇಂದ್ರ ಕೋಡಿಕಲ್ ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಶ್ರೀಯಾನ್ ಉಳಿದಂತೆ ಸಮಿತಿ ಸದಸ್ಯರುಗಳಾಗಿ ದೇವರಾಜ್, ಲೂಯಿಸ್ ಮೊಂತೆರೋ, ರಾಜಾನಾಯಕ್, ಮಂಚಲಪ್ಪರವರುಗಳು ಆಯ್ಕೆಯಾದರು.
ಪ್ರಗತಿಪರ ಚಿಂತಕರಾದ ಡಾ. ಕೃಷ್ಣಪ್ಪ ಕೊಂಚಾಡಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಸಭೆಯ ಅಧ್ಯಕ್ಷತೆಯನ್ನು ವೀರಪ್ಪ .ಬಿ ವಹಿಸಿದ್ದು ಕೊನೆಯಲ್ಲಿ ಅಶೋಕ್ ಶ್ರೀಯಾನ್ ಧನ್ಯವಾದ ಅರ್ಪಿಸಿದರು.