ಮಂಗಳೂರು: ನಗರದ ತಣ್ಣೀರು ಬಾವಿ ಬೀಚ್ ನಲ್ಲಿ ಬ್ಲಾಕ್ ಆಗಿದ್ದ ಕಾರಣಕ್ಕೆ ಅಲ್ಲಿ ಸೇರಿದ್ದ ಯುವಕರಿಗೆ ಪೊಲೀಸರು ಲಾಠಿ ಚಾರ್ಜ್ ಮಾಡಿ ದುರ್ವರ್ತನೆ ತೋರಿದ ಘಟನೆ ನಡೆದಿದೆ. 6ನೇ ಕ್ಲಾಸ್ ಮತ್ತು ಪಿಯುಸಿ ವಿದ್ಯಾರ್ಥಿಗೂ ಲಾಠಿಯಿಂದ ಪೆಟ್ಟು ಬಿದ್ದಿದ್ದು ಪೊಲೀಸರು ವಿರುದ್ಧ ಸ್ಥಳೀಯರು ಗರಂ ಆಗಿ ತಿರುಗು ಬಿದ್ದಿದ್ದಾರೆ.
ಸ್ಥಳೀಯರು ಹೇಳುವ ಪ್ರಕಾರ ವೀಕೆಂಡ್ ಆಗಿದ್ದರಿಂದ ಬೆಳಗ್ಗೆನಿಂದಲೂ ತಣ್ಣೀರು ಬಾವಿ ಬೀಚಿಗೆ ಬರುತ್ತಿದ್ದ ಜನರ ಸಂಖ್ಯೆ ಹೆಚ್ಚಿತ್ತು ಹೀಗಾಗಿ ಬ್ಲಾಕ್ ಆಗಿತ್ತು. ಭಾನುವಾರ ಸಂಜೆ ಅಲ್ಲಿ ಕ್ರಿಕೆಟ್ ಆಡಿ ಬೈಕ್ ನಲ್ಲಿ ತೆರಳುತ್ತಿದ್ದ ಹುಡುಗರನ್ನು ಅಡ್ಡಗಟ್ಟಿದ ಪೊಲೀಸರು ನಿಮ್ಮಿಂದಲೇ ಬ್ಲಾಕ್ ಆಗಿದೆ ಎಂದು ಲಾಠಿ ಬೀಸಿದ್ದಾರೆ
ಲಾಟಿಯ ಏಟಿನಿಂದ 6ನೇ ಕ್ಲಾಸ್ ವಿದ್ಯಾರ್ಥಿಯೊಬ್ಬನಿಗೆ ಗಂಭೀರ ಗಾಯವಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ . ಕೂಡಲೇ ಜನರು ಪೊಲೀಸರ ವಿರುದ್ಧ ರೊಚ್ಚಿಗೆದ್ದಿದ್ದು ಘೇರಾವೋ ಹಾಕಿದ್ದಾರೆ , ನೀವು ಲಾಟಿಯಲ್ಲಿ ಹೊಡೆದಿದ್ದು ಯಾಕೆ ಎಂದು ಮೂವರು ಪೊಲೀಸರನ್ನು ತೀವ್ರ ತರಾಟೆ ಗೆತ್ತಿಕೊಂಡಿದ್ದಾರೆ ಪಣಂಬೂರು ಪೊಲೀಸರ ಕಾರ್ಯದ ಬಗ್ಗೆ ಗರಂ ಆಗಿದ್ದಾರೆ. ಘಟನೆ ಬಗ್ಗೆ ಶಾಸಕ ವೇದವಾಸ್ ಕಾಮತ್ ಮೂಲಕ ಪೊಲೀಸ್ ಕಮಿಷನರಿಗೆ ದೂರು ನೀಡಲಾಗಿದೆ ಪೊಲೀಸರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುವ ವಿಡಿಯೋ ವೈರಲ್ ಆಗಿದೆ.