News Karnataka Kannada
Monday, April 29 2024
ಮಂಗಳೂರು

ಮೇಯಲು ಬಿಟ್ಟಿದ್ದ ದನಗಳ ಕಳವು: ಪ್ರಕರಣ ದಾಖಲು

Mangaluru: Cattle left for grazing stolen
Photo Credit : Pixabay

ಮಂಗಳೂರು: ಮೇಯಲು ಬಿಟ್ಟಿದ್ದ ಎರಡು ದನ ಮತ್ತು ಒಂದು ಕರುವನ್ನು ಕಳವು ಮಾಡಿದ ಘಟನೆ ಮಂಗಳೂರು ತಾಲೂಕಿನ ಬಡಗ ಎಡಪದವು ಗ್ರಾಮದ ಧೂಮಚಡವು ಆಟೋ ರಿಕ್ಷಾ ಪಾರ್ಕ್ ಬಳಿ ನಡೆದಿದ್ದು, ಈ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಗ ಎಡಪದವು ಗ್ರಾಮದ ಹೊಸ ಗದ್ದೆ ನಿವಾಸಿ ಚಂದ್ರ ಗೌಡ ಅವರ ಒಂದು ಕರು ಮತ್ತು ಪರಿಸರದ ನಿವಾಸಿಯೊಬ್ಬರ ಎರಡು ದನಗಳು ಕಳವಾಗಿವೆ.
ಆ. 14 ರಂದು ಮೇಯಲು ಹೋಗಿದ್ದ ಚಂದ್ರ ಗೌಡ ಅವರ ದನ ಕರುಗಳ ಪೈಕಿ 2 ದನಗಳು ಮನೆಗೆ ಮರಳಿದ್ದು, ಒಂದು ಕರು ವಾಪಸಾಗಿಲ್ಲ.

ಈ ಬಗ್ಗೆ ಆ. 15 ರಂದು ಸಂಜೆ ಧೂಮಚಡವು ಆಟೋ ರಿಕ್ಷಾ ಪಾರ್ಕ್ ಬಳಿ ಹುಡುಕಾಟ ನಡೆಸುತ್ತಿದ್ದಾಗ ಪರಿಚಯದ ವ್ಯಕ್ತಿಯೊಬ್ಬರು ಸಮೀಪದಲ್ಲಿರುವ ಅಂಗಡಿಯ ಸಿಸಿ ಕ್ಯಾಮೆರಾ ಪರಿಶೀಲಿಸುವಂತೆ ತಿಳಿಸಿದ್ದರು. ಅದರಂತೆ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅಂಗಡಿಯ ಮುಂದೆ ಮಲಗಿದ್ದ ದನಗಳನ್ನು ಮತ್ತು ಕರುವನ್ನು ತಡ ರಾತ್ರಿ ವೇಳೆ ಇಬ್ಬರು ಕಳ್ಳರು ಹಿಡಿದು ಕಟ್ಟಿ ಕಾರಿನಲ್ಲಿ ತುಂಬಿಸುತ್ತಿರುವ ದೃಶ್ಯ ಸೆರೆಯಾಗಿರುವುದು ಕಂಡು ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು