ಮಂಗಳೂರು: ದ.ಕ ಜಿಲ್ಲಾ ಕಾರ್ಮಿಕ ಬಸ್ಸ್ ನೌಕರ ಸಂಘದ ಅಧ್ಯಕ್ಷ ಶ್ರೀ ಐವನ್ ಡಿ ಸೋಜರವರ ಅಧ್ಯಕ್ಷತೆಯಲ್ಲಿ ಕಾರ್ಮಿಕ ಪರಿಷತ್ ಬಸ್ ನೌಕರರ ಸಂಘದ ವತಿಯಿಂದ ದೇಶದ 75ನೇ ವರ್ಷದ ಸ್ವಾತ್ರಂತ್ರ್ಯ ಮಹೋತ್ಸವವನ್ನು ಮಂಗಳೂರಿನ ಕರಂಗಲಪಾಡಿಯಲ್ಲಿ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತಾನಾಡಿದ ಐವನ್ ಡಿ ಸೋಜರವರು ದೇಶದ ಸ್ವಾತಂತ್ರ್ಯ ಪ್ರತಿಯೊಬ್ಬರ ಹೆಮ್ಮೆಯ ಮತ್ತು ಗೌರವದ ಸಂಕೇತವಾಗಿದ್ದು, ದೇಶಕ್ಕಾಗಿ ಪ್ರತಿಯೊಬ್ಬರು ಅಳಿವು ಸೇವೆ ಸಲ್ಲಿಸುವ ಮೂಲಕ ರಾಷ್ಟ್ರಕ್ಕೆ ಗೌರವ ನೀಡುವ ಕೆಲಸ ಮಾಡಬೇಕಾಗಿದೆ. ‘ದೇಶ ಪ್ರಥಮ ಮತ್ತೆ ಎಲ್ಲವೂ’ ಎಂಬ, ಸಿದ್ಧಾಂತವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ದೇಶದ ಅಭಿವೃದ್ಧಿ ಸಾಧ್ಯ ಎಂದು ನುಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಪರಿಷತ್ ಕಾರ್ಯದರ್ಶಿ ಕೃಷ್ಣ ಡಿ ಅಂಚನ್, ಪದಾಧಿಕಾರಿ ಸುರೇಶ್ ಶೆಟ್ಟಿ ಇಸ್ಮಾಯಿಲ್, ಅಪ್ಪುಸ್ವಾಮಿ, ಭಾಸ್ಕರ್ ರಾವ್, ದೀಕ್ಷಿತ್ ಅತ್ತಾವರ, ಅಬಿಬುಲ್ಲ ಆನಂದ್ ಮತು ಇತರರು ಉಪಸ್ಥಿತರಿದ್ದರು.