ಮಂಗಳೂರು: ಕೇಂದ್ರ ಸರ್ಕಾರದ ಉಕ್ಕಿನ ಸಚಿವಾಲಯದ ಅಡಿಯಲ್ಲಿರುವ ಕಬ್ಬಿಣದ ಅದಿರು ಗಣಿಗಾರಿಕೆಯ ವ್ಯವಹಾರದಲ್ಲಿ ತೊಡಗಿರುವ ಕೆ.ಐ.ಓ.ಸಿ.ಎಲ್ ಮಂಗಳೂರು ಘಟಕವು ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಎದುರಿಸಲು ಉದ್ಯೋಗಿಗಳು, ಸಿಐಎಸ್ಎಫ್ ಸಿಬ್ಬಂದಿ, ಅವರ ಅವಲಂಬಿತರು ಮತ್ತು ಗುತ್ತಿಗೆ ಕಾರ್ಮಿಕರನ್ನು ಒಳಗೊಂಡಂತೆ 98% ವ್ಯಾಪ್ತಿಯೊಂದಿಗೆ ಬೂಸ್ಟರ್ ಡೋಸ್ ಕೋವಿಡ್ ಲಸಿಕೆಗಳನ್ನು ನೀಡಿದ ಮಂಗಳೂರಿನ ಮೊದಲ ಸಾರ್ವಜನಿಕ ವಲಯವಾಗಿದೆ.
ಜಿಲ್ಲಾ ಆರೋಗ್ಯ ಇಲಾಖೆ, ದಕ್ಷಿಣ ಕನ್ನಡದ ಸಹಯೋಗದಲ್ಲಿ ಜುಲೈ ತಿಂಗಳ ಬೇರೆ ಬೇರೆ ದಿನಗಳಲ್ಲಿ ಮಂಗಳೂರಿನ ಪ್ಲಾಂಟ್ ಮತ್ತು ಟೌನ್ಶಿಪ್ ಪ್ರದೇಶಗಳಲ್ಲಿ ಲಸಿಕೆ ಅಭಿಯಾನವನ್ನು ಆಯೋಜಿಸಲಾಗಿತ್ತು. ಇದರಿಂದ ಸರ್ಕಾರದ ಅನುಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗಿತ್ತು. ಕೆ.ಐ.ಓ.ಸಿ.ಎಲ್ ನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಮತ್ತಷ್ಟು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮಾರ್ಗದರ್ಶಿ ಸೂತ್ರಗಳನ್ನು ವಿಧಿಸಲಾಗಿದೆ. ಲಸಿಕೆ ನೀಡಿರುವುದರಿಂದ ಸಿಬ್ಬಂದಿಗಳ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯ ಚೆನ್ನಾಗಿದ್ದು, ಕಂಪನಿಯ ಸುಗಮ ಕಾರ್ಯನಿರ್ವಹಣೆಗೆ ಅನುಕೂಲವಾಗಿದೆ.