News Karnataka Kannada
Tuesday, May 14 2024
ಮಂಗಳೂರು

ಮಂಗಳೂರು: ಕೆಐಓಸಿಎಲ್ ಘಟಕದಲ್ಲಿ ಸಿಬ್ಬಂದಿಗಳಿಗೆ ಬೂಸ್ಟರ್ ಡೋಸ್ ಲಸಿಕೆ

Mangaluru: Booster dose of vaccine for staff at KIOCL plant
Photo Credit :

ಮಂಗಳೂರು: ಕೇಂದ್ರ ಸರ್ಕಾರದ ಉಕ್ಕಿನ ಸಚಿವಾಲಯದ ಅಡಿಯಲ್ಲಿರುವ ಕಬ್ಬಿಣದ ಅದಿರು ಗಣಿಗಾರಿಕೆಯ ವ್ಯವಹಾರದಲ್ಲಿ ತೊಡಗಿರುವ  ಕೆ.ಐ.ಓ.ಸಿ.ಎಲ್ ಮಂಗಳೂರು ಘಟಕವು ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಎದುರಿಸಲು ಉದ್ಯೋಗಿಗಳು, ಸಿಐಎಸ್ಎಫ್ ಸಿಬ್ಬಂದಿ, ಅವರ ಅವಲಂಬಿತರು ಮತ್ತು ಗುತ್ತಿಗೆ ಕಾರ್ಮಿಕರನ್ನು ಒಳಗೊಂಡಂತೆ 98% ವ್ಯಾಪ್ತಿಯೊಂದಿಗೆ ಬೂಸ್ಟರ್ ಡೋಸ್  ಕೋವಿಡ್ ಲಸಿಕೆಗಳನ್ನು ನೀಡಿದ ಮಂಗಳೂರಿನ ಮೊದಲ ಸಾರ್ವಜನಿಕ ವಲಯವಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆ, ದಕ್ಷಿಣ ಕನ್ನಡದ ಸಹಯೋಗದಲ್ಲಿ ಜುಲೈ ತಿಂಗಳ ಬೇರೆ ಬೇರೆ ದಿನಗಳಲ್ಲಿ ಮಂಗಳೂರಿನ ಪ್ಲಾಂಟ್ ಮತ್ತು ಟೌನ್‌ಶಿಪ್ ಪ್ರದೇಶಗಳಲ್ಲಿ ಲಸಿಕೆ ಅಭಿಯಾನವನ್ನು ಆಯೋಜಿಸಲಾಗಿತ್ತು. ಇದರಿಂದ ಸರ್ಕಾರದ ಅನುಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗಿತ್ತು. ಕೆ.ಐ.ಓ.ಸಿ.ಎಲ್ ನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಮತ್ತಷ್ಟು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮಾರ್ಗದರ್ಶಿ ಸೂತ್ರಗಳನ್ನು ವಿಧಿಸಲಾಗಿದೆ. ಲಸಿಕೆ ನೀಡಿರುವುದರಿಂದ ಸಿಬ್ಬಂದಿಗಳ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಆರೋಗ್ಯ ಚೆನ್ನಾಗಿದ್ದು, ಕಂಪನಿಯ ಸುಗಮ ಕಾರ್ಯನಿರ್ವಹಣೆಗೆ ಅನುಕೂಲವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು