ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಸಂದರ್ಭ ಅನ್ಯ ಮತಿಯರಿಗೆ ವ್ಯಾಪಾರಕ್ಕೆ ಅನುಮತಿ ಇಲ್ಲ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಹಾಕಿದ ಬ್ಯಾನರ್ ತೆರವಿಗೆ ಆಗ್ರಹಿಸಿ ಹಾಗೂ ಕರ್ತವ್ಯದಲ್ಲಿ ವಿಫಲರಾದ ಸ್ಥಳೀಯ ಠಾಣೆಯ ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಡಿ ವೈ ಎಫ್ ಸಂಘಟನೆ ಹಿರಿಯ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿತು.
ಸೌಹಾರ್ದದಿಂದ ಎಲ್ಲಾ ಧರ್ಮದವರು ಅನಾಧಿಕಾಲದಿಂದಲೂ ಇಲ್ಲಿನ ಉತ್ಸವದ ಸಂದರ್ಭ ವ್ಯಾಪಾರ ಮಾಡುತ್ತಿದ್ದರು ಆದರೆ ಜನವರಿ 10ರಂದು ಅನ್ಯ ಧರ್ಮದವರು ಸಂತೆ ವ್ಯಾಪಾರ ನಡೆಸುವುದನ್ನು ಬಹಿಷ್ಕಾರ ಹಾಕಲಾಗಿದೆ ಎಂದು ಜನಾಂಗೀಯ ನಿಂದನೆ ಅಳವಡಿಸಲಾಗಿದೆ . ಈ ಬ್ಯಾನರ್ ಅನ್ನು ಸ್ಥಳಿಯ ಪೊಲೀಸರು ಹಾಗೂ ಎಸಿಪಿ ಅವರಿಗೆ ತಿಳಿಸಿ ತೆಗೆಯಲಾಗಿತ್ತು
ಇದೀಗ ಆಡಳಿತ ಮಂಡಳಿಯ ತೀರ್ಮಾನ ಎಂದು ಪೊಲೀಸರು ಹೇಳಿದ್ದರು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಹೆಸರಿನಲ್ಲಿ ಹಾಕಲಾಗಿದೆ . ಈ ನೆಲೆಯಲ್ಲಿ ಕರ್ತವ್ಯ ಲೋಪ ಎಸೆಗಿದ್ದ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕೆಂದು ಸಂಘಟನೆ ಮುಖಂಡರು ಒತ್ತಾಯಿಸಿದರು