News Karnataka Kannada
Tuesday, April 30 2024
ಮಂಗಳೂರು

ಮಂಗಳೂರು: ಕರಾವಳಿಗೆ ಸೌಹಾರ್ದತೆಯ ಪಾಠ ಮಾಡ್ತಿದೆ ಬಾಲ ಯೇಸು ಮಂದಿರ! 

Mnglr
Photo Credit : News Kannada

ಮಂಗಳೂರು:  ಸದ್ಯ ಕೋಮು ಸಂಘರ್ಷದ ಬೆಂಕಿಯಲ್ಲಿ ಬಿದ್ದು ಹತ್ಯೆಗಳ ನಡುವೆ ಬೂದಿ ಮುಚ್ಚಿದ ಕೆಂಡದಂತಿರುವ ಕರಾವಳಿಯ ಪಾಲಿಗೆ ಸದ್ಯ ಮಂಗಳೂರಿನ ಬಿಕರ್ನಕಟ್ಟೆಯ ಬಾಲ ಯೇಸು ಮಂದಿರ ಸೌಹಾರ್ದತೆಯ ಪಾಠ ಮಾಡ್ತಿದೆ. ಇತಿಹಾಸ ಪ್ರಸಿದ್ಧವಾಗಿರುವ ಕ್ರೈಸ್ತರ ಧಾರ್ಮಿಕ ತಾಣ ಬಾಲ ಯೇಸು ಮಂದಿರ ಈ ಭಾಗದ ಸರ್ವಧರ್ಮದ ಜನರ ಆರಾಧನಾ ಕೇಂದ್ರ. ಹೀಗಾಗಿಯೇ ಇಲ್ಲಿ ಒಂಭತ್ತು ದಿನಗಳ ಕಾಲ ನಡೆಯೋ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಜಾತಿ-ಧರ್ಮದ ಹಂಗಿಲ್ಲದೇ ಕರಾವಳಿಯ ಜೊತೆಗೆ ರಾಜ್ಯದ ನಾನಾ ಭಾಗದ ಲಕ್ಷಾಂತರ ಭಕ್ತರು ಆಗಮಿಸ್ತಾರೆ.

ಇಲ್ಲಿ ನೆಲೆನಿಂತಿರೋ ಬಾಲಯೇಸು ಪವಾಡಗಳನ್ನು ನಡೆಸುವ ಮೂಲಕ ಲಕ್ಷಾಂತರ ಜನರ ಬದುಕಲ್ಲಿ ಬೆಳಕು ಮೂಡಿಸಿದ್ದಾನೆ ಅನ್ನೋದು ಸರ್ವಧರ್ಮದ ಭಕ್ತರ ನಂಬಿಕೆ. ಹೀಗಾಗಿ ಒಳಿತನ್ನು ಕಂಡು ಎಲ್ಲಾ ಧರ್ಮಿಯರು ವಾರ್ಷಿಕ ಜಾತ್ರೆಯ ಆ ಒಂಬತ್ತು ದಿನಗಳ ಕಾಲ ಕ್ಷೇತ್ರಕ್ಕೆ ಆಗಮಿಸ್ತಾರೆ. ಇಲ್ಲಿನ ಬಾಲಯೇಸುವಿಗೆ ಪೂಜೆ ಸಲ್ಲಿಸಿ ಕೃತಾರ್ಥರಾಗ್ತಾರೆ.

ಇಲ್ಲಿಗೆ ಬರೋ ಅನ್ಯಧರ್ಮದ ಭಕ್ತರಿಗೆ ಇಲ್ಲಿ ಧರ್ಮದ ವಿಚಾರದಲ್ಲಿ ಗೊಂದಲಗಳೇ ಇಲ್ಲ. ಎಲ್ಲ ಧರ್ಮದವ್ರು ದೆವ್ರನ್ನ ಆರಾಧಿಸೋ ಮೂಲಕ ಭಾವುಕರಾಗ್ತಾರೆ. ಹೀಗಾಗಿಯೇ ಇಡೀ ಕರಾವಳಿಯಲ್ಲೇ ಅನ್ಯಧರ್ಮೀಯರು ಅತೀ ಹೆಚ್ಚು ಆರಾಧಿಸೋ ಕ್ರೈಸ್ತ ಧಾರ್ಮಿಕ ಕೇಂದ್ರವಾಗಿ ಈ ಬಾಲ ಯೇಸು ಮಂದಿರ ಎದ್ದು ನಿಂತಿದೆ. ಸಂಜೆ 6 ಗಂಟೆಯಿಂದ ಆರಂಭವಾಗಿ ಸಂಜೆ 7 ರವರೆಗೆ ಕೊಂಕಣಿ, ಇಂಗ್ಲಿಷ್, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರಂತರವಾಗಿ ಪೂಜಾವಿಧಿಗಳು ನಡೆಯಿತು.

ಇನ್ನೂ ಪ್ರಮುಖ ಬಲಿಪೂಜೆಯೂ ತೆರೆದ ಮೈದಾನದಲ್ಲಿ ಅರ್ಪಿಸಲಾಯಿತು. ಕೋಮು ಸಂಘರ್ಷದ ಬಿರುಗಾಳಿಗೆ ಸಿಲುಕಿ ತತ್ತರಿಸಿರುವ ಕರಾವಳಿಯಲ್ಲಿ ಈ ಪವಿತ್ರ ಪುಣ್ಯ ಕ್ಷೇತ್ರ ಸೌಹಾರ್ದತೆಯ ಪಾಠ ಮಾಡುತ್ತಿರುವುದು ನಿಜಕ್ಕೂ ಮಾದರಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು