ಮಂಗಳೂರು: ಟೋಲ್ ವಿರೋಧಿ ಹೋರಾಟದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿದೆ.ಇದಕ್ಕೆ ಯಾರೂ ಹೆದರಲ್ಲನಮ್ಮಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಇದೆ. ಇಲ್ಲಿನ ಬಂದ ಹಣ ಧರ್ಮ ಧರ್ಮ ಮಧ್ಯೆ ವಿಷ ಬೀಜ ಬಿತ್ತನೆಗೆ ಬಳಸುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡ್ಕರಿ ಬಂದು ೬೦ ಕಿಮಿ ಅಂತರದಲ್ಲಿ ಟೋಲ್ ಇರಬಾರದು ಕಾನೂನು ಬಾಹಿರ ಅಂತಾ ಹೇಳುತ್ತಾರೆ, ಆದರೆ ಅದನ್ನು ಯಾಕೆ ತೆರವು ಮಾಡಲ್ಲ?, ಇದರಲ್ಲಿ ಅವರಿಗೆ ಹಣ ಬರುತ್ತೆ ಎಂಬುದು ಗೊತ್ತಾಗುತ್ತದೆ. ಇಲ್ಲಿ ಬಿಜೆಪಿಗೆ ೪೦ ಶೇ ಅಲ್ಲ ೧೦೦ ಶೇ ಹೋಗ್ತಾ ಇದೆ ಎಂದರು.
ಬಿಜೆಪಿಗರು ಹಿಂದುಳಿದ ವರ್ಗದ ಸಮಾವೇಶ ಮಾಡುವ ಯೋಗ್ಯತೆ ಕಳೆದುಕೊಂಡಿದೆ .ನಾವು ಮಾಡಿದ ಯೋಜನೆಯನ್ನು ಸರಿಯಾಗಿ ಇವರು ಅನುಷ್ಠಾನ ಮಾಡಲಿಲ್ಲ. ಎಲ್ಲಿ ಹೋದರೂ ಹಿಂದುತ್ವ ಹಿಂದುತ್ವ ಅನ್ನೋ ಇವರು ಯಾವ ದೇವಸ್ಥಾನಕ್ಕೆ ಅನುದಾನ ಕೊಟ್ಟಿದ್ದಾರೆ? ಒಂದು ದೇವಸ್ಥಾನಕ್ಕಾದರು ಅನುದಾನ ಕೊಟ್ಟಿದ್ದಾರ ? ಕಾಂಗ್ರೆಸ್ ಚುನಾವಣೆಯಲ್ಲಿ ಜಾತಿ, ಧರ್ಮ ಆಧಾರದಲ್ಲಿ ಮತ ಕೇಳಲ್ಲ. ಅಭಿವೃದ್ಧಿ ಯೋಜನೆಗಳ ಮೇಲೆ ನಮ್ಮ ಪ್ರಣಾಳಿಕೆ ಮೇಲೆ ಮತ ಕೇಳಲಿದ್ದೇವೆ ಎಂದು ಹೇಳಿದರು.