ಮಂಗಳೂರು: ಇಲ್ಲಿನ ಐಕಳ ಪೊಂಪೈ ಕಾಲೇಜಿನಲ್ಲಿ ಇತಿಹಾಸ ವಿಭಾಗ ಹಾಗೂ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಆ.13 ರಂದು ಕಾಲೇಜಿನ ಪ್ರಾವಿಡೆನ್ಸ್ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಾಟಕಕಾರ ಹಾಗೂ ಪತ್ರಕರ್ತ ಪರಮಾನಂದ ಬಿ ಸಾಲ್ಯಾನ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಪುರುಷೋತ್ತಮ ಕೆ ವಿ ಹಾಗೂ ಮ್ಯಾನೇಜ್ಮೆಂಟ್ ರೆಪ್ರೆಸೆಂಟೇಟಿವ್ ರೆ. ಫಾ. ಸುನಿಲ್ ಜೋರ್ಜ್, ನಿವೃತ್ತ ಪ್ರೊಫೇಸರ್ ಯೋಗೇಂದ್ರ ಬಿ, ಕಚೇರಿ ವ್ಯವಸ್ಥಾಪಕ ರಾಕಿ ಜಿ ಲೋಬೊ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.