ಮಂಗಳೂರು: ಕಾಂತಾರ ಚಲನಚಿತ್ರ ದಲಿತರನ್ನು ಅವಮಾನಿಸಿದೆ ಎಂಬ ಆರೋಪವನ್ನು ಪುನರುಚ್ಚರಿಸಿರುವ ದಲಿತ ಸಂಘಟನೆಗಳು ಬುಧವಾರ ಮತ್ತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಮಾಡಿವೆ.
ಚಿತ್ರದಲ್ಲಿ ದಲಿತರನ್ನು ಕೀಳಾಗಿ ಚಿತ್ರಿಸಲಾಗಿದೆ. ಆದುದರಿಂದ ಆ ಭಾಗಗಳನ್ನು ತೆಗೆದು ಹಾಕಬೇಕು, ದಲಿತರನ್ನು ಅವಮಾನಿಸಿದುದಕ್ಕಾಗಿ ಚಿತ್ರದ ನಿರ್ಮಾಪಕರು, ನಿರ್ದೇಶಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.ಜಿಲ್ಲಾಧಿಕಾರಿಗಳು ವಾರದ ಕಾಲಾವಕಾಶ ಕೋರಿದ್ದಾರೆ. ಆ ಬಳಿಕವೂ ಯಾವುದೇ ಕ್ರಮ ಜರುಗದಿದ್ದರೆ ರಾಜ್ಯಾದ್ಯಂತ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸುವುದಾಗಿ ಸಮತಾ ಸೈನಿಕ ದಳದ ಲೋಲಾಕ್ಷ ತಿಳಿಸಿದ್ದಾರೆ.