ಮಂಗಳೂರು: ಅಮೃತೇಶ್ವರ ನಾಟ್ಯಾಲಯ ವಾಮಂಜೂರು ಇದರ ದಶೋತ್ಸವ ಕಾರ್ಯಕ್ರಮ ಮಂಗಳೂರು ಪುರಭವನದಲ್ಲಿ ಜರಗಿತು.
ರಾಜ್ಯೋತ್ಸವ ಕಮಲಾಕ್ಷ ಆಚಾರ್ ಕಾರ್ಯಕ್ರಮ ಉದ್ಘಾಟಿಸಿದರು. ಶಕ್ತಿಪೀಠ, ನೃತ್ಯರೂಪಕ ನಿಜವಾಗಲೂ ಶಿವ ಶಕ್ತಿಯೇ ವೇದಿಕೆಯಲ್ಲಿ ಬಂದು ನೆಲೆಸಿದಂತೆ ಆಗಿದೆ ಎಂದು ಹೇಳಿದರು. ಕೃಷ್ಣ ರಾಜ ತಂತ್ರಿಯವರು ಸಂಸ್ಥೆಯು ಏಳಿಗೆಯನ್ನು ಕಾಣಲಿ ಎಂದು ಆಶೀರ್ವಚನ ನೀಡಿದರು.
ಭಾರತೀ ಸುರೇಶ್ರವರು ದಶೋತ್ಸವದ ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ನಿರ್ದೇಶಕಿಯಾದ ಚಿತ್ರಾಕ್ಷಿ ಅಜಿತ್ ಕುಮಾರ್ರವವರು ತಮ್ಮ ಶಿಷ್ಯೆಯಾಗಿದ್ದ ಸಮಯದಲ್ಲಿ ಇದ್ದ ವಿನಯ ತನ್ಮಯಶೀಲತೆ, ಕಷ್ಟ ಸಹಿಷ್ಣುತೆಯ ಬಗ್ಗೆ ಹೇಳಿದರು. ಸನಾತನ ನ್ಯಾಯಲಯದ ಗುರುಗಳಾದ ಶಾರದಾ ಶೇಖರ್ ಇವರು ‘ಶಕ್ತಿಪೀಠ’ ನೃತ್ಯರೂಪಕವನ್ನು ನಿರ್ದೇಶಿಸಲು ಸಂಸ್ಥೆಯ ನೃತ್ಯ ಗುರುಗಳಾದ ಚಿತ್ರಾಕ್ಷಿ ಅಜಿತ್ ಕುಮಾರ್ರವರು ಕಠಿಣ ಪರಿಶ್ರಮದ ಸಾರ್ಥಕತೆ ಬಗ್ಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸತೀಶ್ ಶೆಟ್ಟಿ ಮೂಡುಜಪ್ಪು ಗುತ್ತು ಅವರು ‘ಅಮೃತೇಶ್ವರ ನಾಟ್ಯಾಲಯವು ಚಿತ್ರಾಕ್ಷಿ ಅಜಿತ್ ಕುಮಾರ್ ಅವರ ನೇತೃತ್ವದಲ್ಲಿಸಂಸ್ಥೆ ಬೆಳವಣಿಗೆ ಕುರಿತು ವಿವರಿಸಿದರು.
ಸದಾನಂದ ಕುಲಾಲ್, ಸುಧಾಕರ್ ಪೂಂಜ, ಭೋಜರಾಜ್ ವಾಮಂಜೂರು, ಪೇಜಾವರ, ಪ್ರಮೋದ್ ಉಳ್ಳಾಲ್, ಚಂದ್ರಶೇಖರ್ ನಾವಡ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರ್ವಹಿಸಿದರು.