ಮಂಗಳೂರು: ನಗರದ ಮಾತಾ ಅಮೃತಾನಂದಮಯಿ ಮಠದಲ್ಲಿ “ಅಮೃತ ವೈಭವ” ಕಾರ್ಯಕ್ರಮ ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಿತು.
ಅಮೃತಪುರಿಯಿಂದ ಆಗಮಿಸಿದ ಮಾತಾ ಅಮೃತಾನಂದಮಯಿ ದೇವಿಯವರ ಹಿರಿಯ ಶಿಷ್ಯ, ಟ್ರಸ್ಟೀ ಹಾಗೂ ಮಾತಾ ಅಮೃತಾನಂದಮಯಿ ಮಠದ ಪ್ರಧಾನ ಕಾರ್ಯದರ್ಶಿ ಸಂಪೂಜ್ಯ ಸ್ವಾಮಿ ಪೂರ್ಣಾಮೃತಾನಂದ ಪುರಿಯವರಿಂದ,
ಪೂಜನೀಯ ಸ್ವಾಮಿನಿ ಮಂಗಳಾಮೃತ ಪ್ರಾಣರವರ ದಿವ್ಯ ಉಪಸ್ಥಿತಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅಮೃತ ವೈಭವ ನೆರವೇರಿತು.
ಭಾರತೀಯ ಸನಾತನ ಪರಂಪರೆಯು ಸಾವಿರಾರು ವರ್ಷಗಳಷ್ಟು ಪುರಾತನವಾಗಿದ್ದು ಅಮೂಲ್ಯ ಜೀವನಾನುಭವಗಳನ್ನು ಸಮಾಜಕ್ಕೆ ನೀಡಿದೆ. ಅದನ್ನು ಪುನರುಜ್ಜೀವನಗೊಳಿಸಿ ಹೊಸ ತಲೆಮಾರನ್ನು ಸಂಪನ್ನವಾಗಿ ಕಟ್ಟ ಬೇಕಾಗಿದೆ ಎಂದು ಸ್ವಾಮೀಜಿ ಹೇಳಿದರು.
ಇದು ಉತ್ತರಾಯಣ ಪ್ರಾರಂಭದ ಶುಭ ಕಾಲ ಎಂದು ಅದರ ಮಹತ್ವದ ಬಗ್ಗೆ ಅರ್ಥ ಪೂರ್ಣ ಪ್ರವಚನ ನೀಡಿದರು .ಆಧುನಿಕ ಜೀವನ ಶೈಲಿಯ ಸಾಧಕ ಬಾಧಕಗಳ ಬಗ್ಗೆ ಅರಿವು ಮೂಡಿಸಿ ಅದಕ್ಕೆ ಸರಳವಾದ ಭಾರತೀಯ ಆಧ್ಯಾತ್ಮಿಕ ಪರಿಹಾರೋಪಾಯಗಳನ್ನು ತಿಳಿಸಿದರು.
ಸೇವಾ ಸಮಿತಿಯ ಅಧ್ಯಕ್ಷ ಡಾ.ವಸಂತಕುಮಾರ ಪೆರ್ಲ ಸ್ವಾಗತಿಸಿದರು. ಸಿಎ ವಾಮನ್ ಕಾಮತ್ ವಂದಿಸಿದರು. ತನುಷಾ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಡಾ.ಜೀವರಾಜ್ ಸೊರಕೆ,ಡಾ.ವೈ ಸನತ್ ಹೆಗ್ಡೆ, ಮುರಳೀಧರ್ ರಮಾಣಿ,ಶ್ರೀಮತಿ ಶ್ರುತಿ ಸನತ್ ಹೆಗ್ಡೆ, ಮುರಳೀಧರ್ ಶೆಟ್ಟಿ, ಸುರೇಶ್ ಅಮೀನ್,ಡಾ.ಆರತಿ ಶೆಟ್ಟಿ, ಯತೀಶ್ ಬೈಕಂಪಾಡಿ, ಸದಾಶಿವ ಭಟ್, ರಮಾ ಭಟ್,
ಡಾ.ಅಶೋಕ ಶೆಣೈ, ಭರತ್ ಕುಮಾರ್ ಎರ್ಮಾಳ್,ಸಿಎ ರಾಮನಾಥ್, ಶಿಲ್ಪಾರೈ, ಪ್ರವೀಣ್ ಶಬರೀಶ್ ಮೊದಲಾದ ಸೇವಾ ಸಮಿತಿಯ ಪದಾಧಿಕಾರಿಗಳು, ಅಮ್ಮನ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.