ಮಂಗಳೂರು: ದೇಶವಿಡೀ ಸ್ವತಂತ್ರ ಭಾರತಕ್ಕೆ 75 ವರ್ಷ ತುಂಬಿದ ಹರ್ಷದಲ್ಲಿದೆ. ಇಡೀ ದೇಶದ ನಾಗರಿಕರು, ಸಂಘಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಈ ದಿನವನ್ನು ಒಂದು ಐತಿಹಾಸಿಕ ದಿನವಾಗಿಸಿದ್ದಾರೆ.
ಹಾಗೇಯೇ ನಮ್ಮ ಹಿಂದೂ ಯುವ ಸೇನೆ ವೃಕ್ಷರಾಜ ಶಾಖೆ ಹಾಗೂ ವೃಕ್ಷರಾಜ ಗ್ರಾಮೀಣಾಭಿವೃದ್ಧಿ ಕೇಂದ್ರ ರಿ. ಇದರ ವತಿಯಿಂದ ವಿಷೇಶ ಕಾರ್ಯಕ್ರಮವನ್ನು ಹಾಕಿ ಕೊಳ್ಳುವ ಮೂಲಕ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ.
ತಮ್ಮ ದುಡಿಮೆಯ ಒಂದಂಶವನ್ನು ಇಂದಿನ ಈ ಕಾರ್ಯಕ್ರಮಕ್ಕೆ ತೆಗೆದಿಡುವ ಮೂಲಕ ಅದರಿಂದ ಸಂಗ್ರಹವಾದ ಮೊತ್ತದಲ್ಲಿ ಮಂಗಳೂರಿನಲ್ಲಿರುವ ಸಂವೇದನಾ ಮಕ್ಕಳ ಮನೆ ಎಂಬ ಆಶ್ರಮದ ಮಕ್ಕಳಿಗೆ ಅಗತ್ಯವಿರುವ ಸುಮಾರು 20,000₹ ಮೌಲ್ಯದ ಒಂದು ತಿಂಗಳ ದಿನಸಿ ಸಾಮಾಗ್ರಿಗಳನ್ನು ನೀಡಿ ಮಕ್ಕಳಿಗೆ ಸಿಹಿ ಹಂಚಿ ಇಂದಿನ ಇಡೀ ದಿನವನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ ಇಂದಿನ ಯುವ ಸಮೂಹಕ್ಕೆ ಮಾದರಿಯಾಗಿದೆ.
ಈ ಸಂದರ್ಭದಲ್ಲಿ ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿಯ ಅದ್ಯಕ್ಷರಾದ ಶ್ರೀ ಯಶೋಧರ ಚೌಟ, ಹಿಂದೂ ಯುವಸೇನೆ ವೃಕ್ಷರಾಜ ಶಾಖೆಯ ಅದ್ಯಕ್ಷರಾದ ಮನೋಜ್ ಪೂಜಾರಿ, ಸಂಚಾಲಕರಾದ ಕಿಶೋರ್ ಕುಮಾರ್, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.