News Karnataka Kannada
Monday, April 29 2024
ಮಂಗಳೂರು

ಮಂಗಳೂರು: ವಿಶೇಷವಾಗಿ ಸ್ವಾತಂತ್ರ್ಯೋತ್ಸವ ಆವರಿಸಿಕೊಂಡ ಹಿಂದೂ ಯುವಸೇನೆಯ ಕಾರ್ಯಕರ್ತರು

Mangaluru: Activists of The Hindu Yuva Sena, especially on the occasion of Independence Day
Photo Credit : By Author
ಮಂಗಳೂರು: ದೇಶವಿಡೀ ಸ್ವತಂತ್ರ ಭಾರತಕ್ಕೆ 75 ವರ್ಷ ತುಂಬಿದ ಹರ್ಷದಲ್ಲಿದೆ. ಇಡೀ ದೇಶದ ನಾಗರಿಕರು, ಸಂಘಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಈ ದಿನವನ್ನು ಒಂದು ಐತಿಹಾಸಿಕ ದಿನವಾಗಿಸಿದ್ದಾರೆ.
ಹಾಗೇಯೇ ನಮ್ಮ ಹಿಂದೂ ಯುವ ಸೇನೆ ವೃಕ್ಷರಾಜ ಶಾಖೆ ಹಾಗೂ ವೃಕ್ಷರಾಜ ಗ್ರಾಮೀಣಾಭಿವೃದ್ಧಿ ಕೇಂದ್ರ ರಿ. ಇದರ ವತಿಯಿಂದ ವಿಷೇಶ ಕಾರ್ಯಕ್ರಮವನ್ನು ಹಾಕಿ ಕೊಳ್ಳುವ ಮೂಲಕ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ.
ತಮ್ಮ ದುಡಿಮೆಯ ಒಂದಂಶವನ್ನು ಇಂದಿನ ಈ ಕಾರ್ಯಕ್ರಮಕ್ಕೆ ತೆಗೆದಿಡುವ ಮೂಲಕ ಅದರಿಂದ ಸಂಗ್ರಹವಾದ ಮೊತ್ತದಲ್ಲಿ ಮಂಗಳೂರಿನಲ್ಲಿರುವ ಸಂವೇದನಾ ಮಕ್ಕಳ ಮನೆ ಎಂಬ ಆಶ್ರಮದ ಮಕ್ಕಳಿಗೆ ಅಗತ್ಯವಿರುವ ಸುಮಾರು 20,000₹ ಮೌಲ್ಯದ ಒಂದು ತಿಂಗಳ ದಿನಸಿ ಸಾಮಾಗ್ರಿಗಳನ್ನು ನೀಡಿ ಮಕ್ಕಳಿಗೆ ಸಿಹಿ ಹಂಚಿ ಇಂದಿನ ಇಡೀ ದಿನವನ್ನು ಅವರೊಂದಿಗೆ ಹಂಚಿಕೊಳ್ಳುವ ಮೂಲಕ ಇಂದಿನ ಯುವ ಸಮೂಹಕ್ಕೆ ಮಾದರಿಯಾಗಿದೆ.
ಈ ಸಂದರ್ಭದಲ್ಲಿ ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿಯ ಅದ್ಯಕ್ಷರಾದ ಶ್ರೀ ಯಶೋಧರ ಚೌಟ, ಹಿಂದೂ ಯುವಸೇನೆ ವೃಕ್ಷರಾಜ ಶಾಖೆಯ ಅದ್ಯಕ್ಷರಾದ ಮನೋಜ್ ಪೂಜಾರಿ, ಸಂಚಾಲಕರಾದ ಕಿಶೋರ್ ಕುಮಾರ್, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು