News Karnataka Kannada
Monday, May 06 2024
ಮಂಗಳೂರು

ಮಂಗಳೂರು: ಜೀವವೈವಿಧ್ಯತೆ ಮತ್ತು ಸಂರಕ್ಷಣೆ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರ

Mangaluru: A two-day national workshop on biodiversity and conservation
Photo Credit : News Kannada

ಮಂಗಳೂರು: ಆನ್ವಯಿಕ ಪ್ರಾಣಿಶಾ‌‌ಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳ ಗಂಗೋತ್ರಿ, ದಿನಾಂಕ 15 ಮತ್ತು 16 ಡಿ.2022 ರಂದು ಎರಡು ದಿನಗಳ ಜೀವವೈವಿಧ್ಯತೆ ಮತ್ತು ಸಂರಕ್ಷಣೆ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಮಂಗಳ ಅಡಿಟೋರಿಯಮ್‌ನಲ್ಲಿ ಏರ್ಪಡಿಸಾಲಗಿತ್ತು.

ಈ ಕಾರ್ಯಾಗಾರವನ್ನು ಶ್ರೀ ಶ್ರೀನಿವಾಸುಲು, ಐ ಎಫ್ ಎಸ್, ಸದಸ್ಯ ಕಾರ್ಯಾದರ್ಶಿಗಳು, ಕಾರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟಣಾ ಬಾಷಣದಲ್ಲಿ ಜೀವವೈವಿಧ್ಯತೆ ಮತ್ತು ವನ್ಯಜೀವಿ ಸಂರಕ್ಷಣೆ ಪ್ರಸ್ತುತ ಕಾಲಘಟ್ಟದ ಅತ್ಯವ್ಯಶಕ ಕಾರ್ಯವಾಗಿದೆ. ಅವರು ಮುಂದುವರೆದು ಮಾತನಾಡುತ್ತಾ ವಿಜ್ನಾನಿಗಳ ಸಂಶೋಧನೆಗಳು ಸಮಾನ್ಯಜನರಿಗೆ ತಲುಪವ ಭಾಷೆಯಲ್ಲಿ ಇರಬೇಕು ಮತ್ತು ಸಮಾನ್ಯಜನರಿಗೆ ಜೀವವೈವಿಧ್ಯತೆ ಮತ್ತು ಸಂರಕ್ಷಣೆ ಪ್ರಾಮುಖ್ಯತೆಯನ್ನು ಅರ್ಥಮಾಡಿಸಿದಾಗ ಮಾತ್ರ ಪ್ರಕ್ರುತಿ ಸಂರಕ್ಷಣೆಯ ಕುರಿತು ಸರ್ಕಾರದ ಕಾನೂನು ಜಾರಿಮಾಡಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಗೌರವ ಅಥಿತಿಯಾಗಿ ಮತ್ತು ದಿಕ್ಸೂಚಿ ಭಾಷಣವನು ಖ್ಯಾತ ಪರಿಸರ ವಿಜ್ನಾನಿ ಡಾ.ರಾಮಚಂದ್ರ, ಭಾರತೀಯ ವಿಜ್ನಾನ ಸಂಸ್ಥೆ, ಬೆಂಗಳೂರು. ಇವರು ನೀರಿನ ಸಂರಕ್ಷಣೆಯ ಪ್ರಮುಖ್ಯತೆ ಹಾಗೂ ಪಶ್ಚಿಮ ಮಟ್ಟಗಳ ಜೀವ ಸಂಕುಲಗಳ ಸಂರಕ್ಷಣೆಗೆ ಕುರಿತು ಮಾತಾನಡುತ್ತಾ, ಪಶ್ಚಿಮ ಮಟ್ಟಗಳ ಸಂರಕ್ಷಣೆಯು ಅತಿ ಮುಖ್ಯವಾಗಿದೆ. ಜೀವಜಲ,ನದಿ ಸಮುದ್ರ, ಹಾಗೂ ಜೌಗು ಪ್ರದೇಶದ ಪ್ರಾಖ್ಯತೆ ಕುರಿತು ತಿಳಿಸಿದರು.

ಪ್ರೋ. ಪಿ. ಸುಬ್ರಮಣ್ಯ ಯಡಪಡಿತ್ತಾಯ ಮಾನ್ಯ ಗೌರವಾನ್ವಿತ ಕುಲಪತಿಗಳು, ಮಂಗಳೂರು ವಿಶ್ವವಿದ್ಯಾನಿಲಯ, ಅಧ್ಯಕ್ಷತೆ ವಹಿಸಸಿದ್ದರು. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ದೇಶದ ಬೆಳವಣಿಗೆಗೆ ಅಬಿವೃದ್ದಿಯ ಪೂರಕ ಚಟುವಟಿಕೆಗಳು ಅತಿಅವ್ಯಕ, ಆದರೆ ಇದರಿಂದ ನಾವು ಜೀವವೈವಿಧ್ಯತೆ ಮತ್ತು ನಮ್ಮ ಪ್ರಕೃತಿಯ ಸ್ವಲ್ಪಭಾಗವನ್ನು ಕಳೆದುಕೊಳ್ಳುವ ಸಂಭವ
ಹೆಚ್ಚಾಗಿರುತ್ತದೆ. ಸುಸ್ಥಿರ ಅಭಿವುದ್ದಿ ಈಗಿನ ಅತ್ಯಾವಶ್ಯಕ. ನಾವು ಪರಿಸರ ಸ್ನೇಹ ಮಾರ್ಗಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿವುದರ ಮೂಲಕ ಪ್ರಕೃತಿ ಮತ್ತು ಜೀವವೈವಿಧ್ಯತೆ ಸಂರಕ್ಷಣೆ ಮಾಡಬಹುದಾಗಿದೆ. ಸಾರ್ವಜನಿಕರ ಜವಬ್ದಾರಿಯುತ ಭಾಗವಹಿಸಿಕೆಯ ಮೂಲಕ ನಾವು ನಮ್ಮ ಪರಿಸರ ಸಂರಕ್ಷಣೆ ಮಾಡಬಹುದಾಗಿದೆ.

ಈ ಕಾರ್ಯಾಗಾರದ ಪ್ರಯೋಜನವನ್ನು ಭಾಗವಸಿರುವ ಸಂಶೋಧಕರು, ವಿದ್ಯಾರ್ಥಿಗಳು, ಪ್ರಾಧ್ಯಪಕರು ಪಡೆದುಕೊಳ್ಳಲಿ ಹಾಗೂ ಈ ಕಾರ್ಯಾಗಾರವನ್ನು ಆಯೋಜಕರಾದ ಡಾ.ನರಸಿಂಹಯ್ಯನವರಿಗೆ ಅಬಿನಂದನೆಗಳನ್ನು ತಿಳಿಸಿದರು ಮತ್ತು ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಕೋರಿದರು.

ಈ ಕಾರ್ಯಾಗಾರದಲ್ಲಿ ಎಂಟಕ್ಕೊ ಹೆಚ್ಚು ಖ್ಯಾತ ವಿಜ್ನಾನಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಮೂನ್ನೂರಕ್ಕು ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ವಿವಿಧ ಕಾಲೇಜಿಗಳಿಂದಮತ್ತು ವಿಶ್ವವಿದ್ಯಾನಿಲಯಗಳ ವಿದ್ಯರ್ಥಿಗಳಿಂದ ಮೂವತ್ತುಕ್ಕು ಹೆಚ್ಚು ಪೋಸ್ಟರ್ ಗಳನ್ನು ಪ್ರದರ್ಶನದ ಸ್ಫರ್ದೆಗೆ ಭಾಗವಸಿದ್ದರು.

ಕಾರ್ಯಗಾರದ ಸಂಯೋಜಕರಾದ ಡಾ.ನರಸೀಂಹಯ್ಯ ಎನ್, ಸಹಾಯಕ ಪ್ರಾಧ್ಯಾಪಕರು ಆನ್ವಯಿಕ ಪ್ರಾಧ್ಯಪಕರು, ಮಂಗಳೂರು ವಿಶ್ವವಿದ್ಯಾನಿಲಯ ಇವರು ಎಲ್ಲ ಅತಿಥಿಗಳನ್ನು ಸ್ವಾಗತಿಸಿಸ್ದರು ಮತ್ತು ಕಾರ್ಯಾಗಾರದ ಬಗ್ಗೆ ಪ್ರಸ್ಥಾವನೆಗೈದರು. ಡಾ.ಎಂ.ಎಸ್.ಮುಸ್ತಾಕ್, ವಿಭಾಗದ ಅಧ್ಯಕ್ಷರು ವಂದಿಸಿದರು, ಕುಮಾರಿ ಲಾವಣ್ಯ ಮತ್ತು ಸುಮಕೋಟೆ ಇವರು ಕಾರ್ಯಕ್ರಮ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು