ಮಂಗಳೂರು: ಬಾಲ ಯೇಸುವಿನ ಪುಣ್ಯಕ್ಷೇತ್ರ ಕಾರ್ಮೆಲ್ ಹಿಲ್ ಬಿಕರ್ನಕಟ್ಟೆ ಇದ್ರ ವಾರ್ಷಿಕ ಮಹೋತ್ಸವ ಜನವರಿ ೧೪ ರಿಂದ ೧೬ ರ ವರೆಗೆ ನಡೆಯಲಿದ್ದು, ಇದ್ರ ಹೊರೆಕಾಣಿಕೆ ಮೆರವಣಿಗೆ ಮಂಗಳೂರಿನ ಕುಲಶೇಖರ ಕೈಕಂಬದಿಂದ ಬಾಲ ಯೇಸು ಪುಣ್ಯಕ್ಷೇತ್ರದ ವರೆಗೆ ನೆರವೇರಿತು.
ಹೊರೆ ಕಾಣಿಕೆ ಮೆರವಣಿಗೆಗೆ ಸೈಂಟ್ ಜೋಸೆಫ್ ಮೊನೆಸ್ಟರಿ ಸುಪೀರಿಯರ್ ಫಾ. ಚಾರ್ಲ್ಸ್ ಸೆರಾವೊ ಚಾಲನೆ ನೀಡಿದರು. ಬಳಿಕ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ವಾಮಂಜೂರು ಚರ್ಚ್ ಧರ್ಮ ಗುರು ಫಾ. ಜೇಮ್ಸ್ ಡಿಸೋಜ, ಮನಪಾ ಸದಸ್ಯರಾದ ನವೀನ್ ಡಿಸೋಜ, ಲ್ಯಾನ್ಸ್ ಲೋಟ್ ಪಿಂಟೊ, ಕವ್ಯಾ ನಟರಾಜ್, ಪ್ರವೀಣ್ ಚಂದ್ರ ಆಳ್ವ, ಎಸಿ ವಿನಯ್ ರಾಜ್, ಭಾಸ್ಕರ್ ಮೊಯ್ಲಿ, ಮಾಜಿ ಮನಪಾ ಸದಸ್ಯೆ ಸಬಿತಾ ಮಿಸ್ಕಿತ್, ಬಾಲ ಯೇಸುವಿನ ಪುಣ್ಯಕ್ಷೇತ್ರದ ನಿರ್ದೇಶಕ ಫಾ. ರೋವೆಲ್ ಡಿಸೋಜಾ, ನಿರ್ದೇಶಕರಾದ ಫಾ. ಸ್ಟೀಫನ್ ಲೋಬೊ ಮತ್ತಿತರರು ಉಪಸ್ಥಿತರಿದ್ದರು.