ಮಂಗಳೂರು: ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್ನ ಅಂಗ ಸಂಸ್ಥೆಯಾದ ಎ. ಜೆ. ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಕೇಂದ್ರ ಸರಕಾರದ ಸಂಸ್ಕೃತಿ ಸಚಿವಾಲಯದ ಪ್ರಾಯೋಜಕತ್ವದೊಂದಿಗೆ ಮತ್ತು ಅನನ್ಯ ಇನ್ಸಿಟ್ಯೂಟ್ ಫಾರ್ ಡೆವೆಲಪ್ಮೆಂಟ್ ರಿಸರ್ಚ್ ಮತ್ತು ಸೋಶಿಯಲ್ ಆ್ಯಕ್ಷನ್ ಸಂಸ್ಥೆ, ಲಕ್ಕೂ ಇದರ ಸಹಭಾಗಿತ್ವದೊಂದಿಗೆ ಆಧುನಿಕ ಭಾರತೀಯ ನವೋದಯದ ಪಿತಾಮಹ ಮತ್ತು ಮಹಿಳಾ ಅಭಿವೃದ್ಧಿಯ ಹರಿಕಾರ ರಾಜಾರಾಮ್ ಮೋಹನ್ ರಾಯ್ ರವರ 250ನೇ ಹುಟ್ಟುಹಬ್ಬದ ಆಚರಣೆಯ ಪ್ರಯುಕ್ತ “ನವಭಾರತದಲ್ಲಿ ಮಹಿಳಾ
ಸಬಲೀಕರಣ ಮತ್ತು ಪರಿವರ್ತನೆಯಲ್ಲಿ ರಾಜಾರಾಮ್ ಮೋಹನ್ರಾಯ್ ಅವರ ಪ್ರಸ್ತುತತೆ” ಎಂಬ ವಿಷಯದ ಬಗ್ಗೆ ಎರಡು ದಿನಗಳ ವಿಚಾರ ಸಂಕಿರಣವನ್ನು ಜನವರಿ 30 ಮತ್ತು 31 ರಂದು ಆಯೋಜಿಸಲಾಗಿದೆ.
ದಿನಾಂಕ 30.01.2023 ರಂದು ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ಸುನಿಲ್ ಕುಮಾರ್, ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವರು, ಕರ್ನಾಟಕ ಸರಕಾರ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿರುವರು. ಆರು ಪ್ರಮುಖ ವಿಷಯಗಳ ಮೇಲೆ ವಿವಿಧ ಕ್ಷೇತ್ರಗಳ ನುರಿತ ತಜ್ಞರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ದಿನಾಂಕ 31.01.2023 ರಂದು ಸಂಜೆ 3.30 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಭಾರತ ಸರಕಾರದ ನೀತಿ ಆಯೋಗದ ಉಪಸಲಹೆಗಾರರಾದ ಡಾ| ಆರ್. ವಿ. ಪಿ. ಸಿಂಗ್ ಹಾಗೂ ಮಂಗಳೂರು ದಕ್ಷಿಣ ವಿಧಾನಸಭಾ ಸದಸ್ಯರಾದ ಶ್ರೀ ವೇದವ್ಯಾಸ ಕಾಮತ್ ಮತ್ತು ಇತರ ಗಣ್ಯರು ಭಾಗವಹಿಸಲಿದ್ದಾರೆ.ಎಂದು ಪತ್ರಿಕಾ ಗೋಷ್ಠಿಯಲ್ಲಿ ಸಂಘಟಕರಾದ ಜಯ ಪ್ರಕಾಶ್ ರಾವ್ ತಿಳಿಸಿದ್ದಾರೆ.