ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಕಾವೂರು ಇವರ ವತಿಯಿಂದ ನಗರದ ಸ್ನೇಹಾಲಯ ನಿರ್ಗತಿಕರ ಆಶ್ರಮಕ್ಕೆ ಭೇಟಿ ನೀಡಲಾಯಿತು. ಈ ಸಂದರ್ಭದಲ್ಲಿ ಆಶ್ರಮಕ್ಕೆ ಬೇಕಾಗುವ ಸಾಮಗ್ರಿಗಳು ಬಟ್ಟೆ, ವಸ್ತ್ರಗಳನ್ನು ಹಾಗೂ 3000 ರೂ ಬೆಲೆ ಬಾಳುವ ದಿನಸಿ ವಸ್ತುಗಳನ್ನು ಹಾಗೂ 8000/-ಚೆಕ್ಕನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷರು ವಿಕ್ಟರ್ ಮೊರಾಸ್, ಕಾರ್ಯದರ್ಶಿ ಅಶ್ವಿನ್ ಕುಮಾರ್, ಸುಜಾತ ಶೆಟ್ಟಿ, ಸುಜಾತ ಡಿಸೋಜ, ಹಾಗೂ ರೇಷ್ಮಾ ಮೋರಸ್ ಉಪಸ್ಥಿತರಿದ್ದರು. ಈ ನೆರವಿಗೆ ಕ್ಲಬ್ ನ ಎಲ್ಲಾ ಸದಸ್ಯರಿಗೆ ಸ್ನೇಹಾಲಯದ ಆಡಳಿತ ಮಂಡಳಿ ಕೃತಜ್ಞತೆ ಸಮರ್ಪಿಸಿದೆ.