ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಕಾವೂರು ಇವರ ವತಿಯಿಂದ ನಗರದ ವಾಮಂಜೂರಿನ ಕಸ್ಟಮ್ ಕಾಲೋನಿಯಲ್ಲಿ ಕ್ಲಬ್ಬಿನ ಮಾಸಿಕ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ಬಿನ ಅಧ್ಯಕ್ಷರಾದ ವಿಕ್ಟರ್ ಮೊರಸ್, ಕಾರ್ಯದರ್ಶಿ ಅಶ್ವಿನ್ ಕುಮಾರ್, ಖಜಾಂಜಿ ರಾಕೇಶ್ ಶೆಟ್ಟಿ ಹಾಗೂ ಜಿಲ್ಲಾ ಸಂಗಮ ಕೋಆರ್ಡಿನೇಟರ್ ಮೋಹನದಾಸ್ ಶೆಟ್ಟಿ , ಸುನಿಲ್ ಶೆಟ್ಟಿ , ರಘು ಸಾಲಿಯಾನ , ದಿನೇಶ್ ಕರ್ಕೇರ ನಾಗೇಶ್ ಕೋಟ್ಯಾನ್ , ರೇಷ್ಮಾ ಮೊರಾಸ್, ನಾಗರಾಜ ಪಂಡಿತ , ರಾಹುಲ್ ಸಲ್ದಾನ , ಕಾವೂರು ಪರಿಸರದ ಸಾಮಾಜಿಕ ಕಾರ್ಯಕರ್ತೆ ಫೆಲ್ಸಿ ರೇಗೋ ಉಪಸ್ಥಿತರಿದ್ದರು.
ಇದೇ ವೇಳೆ ಮಂಗಳೂರು ವಲಯದ ಪಚ್ಛನಾಡಿ ಸಮೀಪ ದ ಎದುರು ರೈಲು ಪಟ್ಟೆಗೆ ಮರ ಬಿದ್ದಿದ್ದನ್ನು ಗಮನಿಸಿದ ಅದನ್ನು ತೆರವುಗೊಳಿಸಲು ಸಹಕರಿಸಿದ ಚಂದ್ರಾವತಿ ಬಂಗೇರ, ಹಾಗೂ ಸುರೇಶ್ ನಾಯರ್ ಹಾಗೂ ಸೌಮ್ಯ ಸುರೇಶ್ ನಾಯರ್ ಪುತ್ರಿ ಲೇಡಿಲ್ ಉರ್ವ ವಿಕ್ಟೋರಿಯಾ ಕೊಂಪೋ ಸೈಟ್ ಪಿಯು ಕಾಲೇಜ್ ವಿದ್ಯಾರ್ಥಿನಿ ಸನಾ 2022- 23ನೇ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ 91 ಶೇ ಅಂಕವನ್ನು ಪಡೆದು ಉತ್ತೀರ್ಣರಾಗಿದ್ದು, ವಿದ್ಯಾರ್ಥಿಗೆ ಲಯನ್ಸ್ ಕ್ಲಬ್ ಕಾವೂರಿನ ಎಲ್ಲಾ ಸದಸ್ಯರ ಪರವಾಗಿ ಸಹಾಯಧನವನ್ನು ಕೊಟ್ಟು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮಕ್ಕೆ ಬಂದಂತ ಎಲ್ಲಾ ಸದಸ್ಯರುಗಳಿಗೆ ಕ್ಲಬ್ಬಿನ ಅಧ್ಯಕ್ಷರಾದ ವಿಕ್ಟರ್ ಮೊರಾಸ್ ಸ್ವಾಗತವನ್ನು ಬಯಸಿದರು.
ಕ್ಲಬ್ಬಿನ ಖಜಾಂಜಿ ರಾಕೇಶ್ ಶೆಟ್ಟಿ ಅವರು ಧನ್ಯವಾದಗಳು ಸಮರ್ಪಿಸಿದರು.