ಸುಳ್ಯ: ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಫುಡ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ ಗುತ್ತಿಗಾರಿನ ಅಮರ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸಿದ್ಧಿದಾತ್ರಿ ಸಂಜೀವಿನಿ ತಂಡದ ಯಶೋಗಾಥೆಯನ್ನು ಪತ್ರಕರ್ತ ಗುರುವಪ್ಪ ಬಾಳೆಪುಣಿ ಬರಹರೂಪಕ್ಕೆ ಇಳಿಸಿದ್ದು, ಈ ಯಶೋಗಾಥೆ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿಸಿದ “ಸಾಧಕ ಕುಶಲಕರ್ಮಿಗಳು” ಪುಸ್ತಕದಲ್ಲಿ ಪ್ರಕಟಗೊಂಡಿದೆ.
ಗುತ್ತಿಗಾರಿನಲ್ಲಿ 35 ವರ್ಷಗಳಿಂದ ಕಬ್ಬಿಣದ ಕೆಲಸ ಮಾಡುತ್ತಿರುವ ಲೀಲಾವತಿ ಪೈಕ ಅವರ ಸಂದರ್ಶನವನ್ನು ಪತ್ರಕರ್ತ ಗುರುವಪ್ಪ ಅವರು ನಡೆಸಿದ್ದರು.