ಪುತ್ತೂರು: ಜೆಡಿಎಸ್ ಪಕ್ಷದ ಅಭ್ಯರ್ಥಿ ದಿವ್ಯಪ್ರಭಾ ಗೌಡ ಚಿಲ್ಲಡ್ಕ ಅವರು ಏ.19ರಂದು ತನ ಹೊತ್ತ ಮಹಿಳೆಯೊಂದಿಗೆ ಪುತ್ತೂರಿನಲ್ಲಿ ರೋಡ್ ಶೋ ಮೂಲಕ ಮತ ಯಾಚಿಸಿದರು.
ಬೆಳಿಗೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ದರ್ಬೆ ಶ್ರೀರಾಮ ಸೌಧದ ಮಹಡಿಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಬಳಿಕ ಮರವಣಿಗೆಯು ಪ್ರಾರಂಭಗೊಂಡಿತು. ದರ್ಬೆ ವೃತ್ತದ ಬಳಿಯಿಂದ ಹೊರಟ ಮೆರವಣಿಗೆಯು ಮುಖ್ಯರಸ್ತೆಯ ಮೂಲಕ ಸಂಚರಿಸಿ ಬೊಳುವಾರುವರೆಗೆ ಸಾಗಿ ಬಂತು.
ಜೆಡಿಎಸ್ ಪಕ್ಷದ ಚಿಹ್ನೆಯಾಗಿರುವ ತೆನೆ ಹೊತ್ತ ಮಹಿಳೆಯ ವೇಷವು ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆಯಿತು. ಜೆಡಿಎಸ್ ಪಕ್ಷದ ನಿಕಟ ಪೂರ್ವ ಅಧ್ಯಕ್ಷ ಐ.ಸಿ ಕೈಲಾಸ್, ಪುಧಾನ ಕಾರ್ಯದರ್ಶಿ ಮಹಾವೀರ ಜೈನ್, ಮಹಿಳಾ ಘಟಕದ ಅಧ್ಯಕ್ಷೆ ಪದ್ಮಮಣಿಯನ್, ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಪ್ರಿಯ ಸಾಲ್ಮಾನ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಪ್ರಭಾಕರ ಸಾಲ್ಯಾನ್, ಉಪ್ಪಿನಂಗಡಿ ಘಟಕದ ಅಧ್ಯಕ್ಷ ಜಯರಾಜ ಅಮೀನ್, ನಗರ ಜೆಡಿಎಸ್ ಅಧ್ಯಕ್ಷ ವಿಕ್ಸರ್ ಗೊನ್ಸಾಲ್ವಿಸ್, ಯುವ ಜೆಡಿಎಸ್ ಶಿವು ಸಾಲಾನ್, ಪಕ್ಷದ ಪ್ರಮುಖರಾದ ಗಧಾದರ ಗೌಡ ಮಕ್ಕಾಗ, ಇಬ್ರಾಹಿಂ ಪರ್ಪುಂಜ, ರಾಧಾಕೃಷ್ಣ, ಸಾಲ್ಮಾನ್, ಶ್ರೇಯಾಂಸ್ ಕುಮಾರ್ ಜೈನ್, ನಝೀರ್ ಬಪ್ಪಳಿಗೆ ಸೇರಿದಂತೆ ಹಲವು ಮಂದಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.