ಬೆಳ್ತಂಗಡಿ: ಮಾಜಿ ಸಚಿವ, ಕಾಂಗ್ರೇಸ್ ಪಕ್ಷದ ಗಂಗಾಧರ ಗೌಡರನ್ನು ಆದಾಯ ತೆರಿಗೆ ಅಧಿಕಾರಿಗಳು ಪ್ರಶ್ನಿಸಿದ್ದಾರೆ.
ಸೋಮವಾರ ಮುಂಜಾನೆ ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಮನೆಗೆ ದಾಳಿ ನಡೆಸಿದ ಅಧಿಕಾರಿಗಳು, ಇದೇ ಸಂದರ್ಭ ಅವರ ಕಾಲೇಜಿಗೆ ಹಾಗೂ ಇಂದಬೆಟ್ಟಿನಲ್ಲಿರುವ ಇನ್ನೊಂದು ಮನೆಗೂ ದಾಳಿ ನಡೆಸಿ ದಾಖಲೆ ಇತ್ಯಾದಿಗಳನ್ನು ಪರಿಶೀಲಿಸಿದ್ದಾರೆ.
ಮುಂಜಾನೆಯಿಂದ ತಡ ರಾತ್ರಿವರೆಗೂ ಶೋಧ ಕಾರ್ಯಾಚರಣೆ ನಡೆದಿದೆ. ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲಾ.
ಗೌಡರು ಮೂಲತಃ ಕಾಂಗ್ರೇಸ್ ನಾಯಕರು ಬಳಿಕ ಅವರು ಜೆಡಿಎಸ್ಗೂ, ಬಿಜೆಪಿಗೂ ಪಕ್ಷಾಂತರ ಮಾಡಿದ್ದರು. ಇದೀಗ ಕಾಂಗ್ರೇಸ್ನಲ್ಲಿದ್ದು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದರಲ್ಲದೆ ಅರ್ಜಿಯನ್ನೂ ಹಾಕಿದ್ದರು. ಆದರೆ ಟಿಕೇಟ್ ಸಿಗದೆ ನಿರಾಶರಾಗಿದ್ದರು.
ಈ ಮಧ್ಯೆ ಭಾನುವಾರ ಅವರನ್ನು ಪಕ್ಷದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆದಾಯ ತೆರಿಗೆ ದಾಳಿಯ ವಿದ್ಯಮಾನ ಕುತೂಹಲ ಕೆರಳಿಸಿದೆಯಲ್ಲದೆ ಪ್ರಸ್ತುತ ರಾಜಕೀಯದಲ್ಲಿ ಸಂಚಲನಕ್ಕೂ ಕಾರಣವಾಗಿದೆ.