News Karnataka Kannada
Friday, May 03 2024
ಮಂಗಳೂರು

ಯೆನೆಪೋಯ ದಂತ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಉದ್ಘಾಟನೆ

Inauguration of Youth Red Cross Unit of Yenepoya Dental College
Photo Credit : News Kannada

ಮಂಗಳೂರು: ಯೆನೆಪೋಯ ದಂತ ಕಾಲೇಜಿನ (ಪರಿಗಣಿಸಲ್ಪಟ್ಟ ವಿಶ್ವಾವಿದ್ಯಾನಿಲಯ) ಯುವ ರೆಡ್ ಕ್ರಾಸ್ ಘಟಕದ ಉದ್ಘಾಟನೆಯನ್ನು ನಡೆಸಲಾಯಿತು. ಡಾ. ಶ್ಯಾಮ್ ಎಸ್ ಭಟ್, ಡೀನ್, ಫ್ಯಾಕಾಲ್ಟಿ ಆಪ್ ಡೆಂಟಿಸ್ಟಿ ಎಲ್ಲರನ್ನು ಸ್ವಾಗತಿಸಿದರು.

ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಸಿ ಏ ಶಾಂತರಾಮ್ ಶೆಟ್ಟಿ ಮತ್ತು ಗೌರವ ಅತಿಥಿಗಳಾದ ಶ್ರೀಯುತ ಯತೀಶ್ ಬ್ಯೆಕಂಪಾಡಿಯವರನ್ನು ಎಲ್ಲರಿಗೂ ಪರಿಚಯಿಸಿದರು.

ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಚೇರ್‌ಮೆನ್‌ಗಳಾದ ಶ್ರೀಯುತ ಸಿ ಏ ಶಾಂತರಾಮ್ ಶೆಟ್ಟಿ, ಯೆನೆಪೋಯ ದಂತ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಉದ್ಘಾಟಿಸಿ , ತಂಡದ ಕಾರ್ಯ ವೈಖರಿಯನ್ನು
ಶ್ಲಾಘಿಸಿದರು.

ಶ್ರೀಯುತ ಯತೀಶ್ ಬ್ಯೆಕಂಪಾಡಿಯವರು ಯುವ ರೆಡ್‌ಕ್ರಾಸ್‌ನ ಲಾಂಛನವನ್ನು ಬಿಡುಗಡೆಗೊಳಿಸಿದರು. ಯೆನೆಪೋಯ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷಿಕಾಂತ ಚಾತ್ರರವರು ಅದ್ಯಕ್ಷೀಯ ಭಾಷಣವನ್ನು ಮಾಡಿದರು ಮತ್ತು ಯೆನೆಪೋಯ ರಕ್ತದಾನಿಗಳ ಕೋಶದ ಪರಿಕಲ್ಪನೆಯನ್ನು ಎಲ್ಲರಿಗೂ ಪರಿಚಯಿಸಿದರು.

ಪ್ರಥಮ ಹಾಗೂ ದ್ವಿತೀಯ ವರ್ಷದ ದಂತ ವ್ಯೆದ್ಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಶ್ರೀಮತಿ ನಿತ್ಯಾಶ್ರಿ, ನೋಡಲ್ ಅದಿಕಾರಿ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವಾವಿದ್ಯಾನಿಲಯದ ಡಾ. ಮಾಜಿ ಜೋಶ್, ಉಪ ಪ್ರಾಂಶುಪಾಲರು, ಡಾ.ಸಂದೀಪ್ ಹೆಗ್ದೆ. ಡಾ. ಸುದೀಂದ್ರ ಪ್ರಭು, ಡಾ. ಶಕೀಲ್ ಎಮ್ ಹಿರಿಯ ಉಪನ್ಯಾಸಕರು ಕಾರ್ಯಾಕ್ರಮದಲ್ಲಿ ಉಪಸ್ಥಿತರಿದ್ದರು.

ಡಾ. ಸ್ಯಯದ್ ಮಹಮ್ಮದ್ ಮಿಕ್‌ದಾದ್ , ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿಗೆ ವಂದಿಸಿದರು. ರಾಷ್ಟಗೀತೆಯ ಜೊತೆಗೆ ಕಾರ್ಯಕ್ರಮವನ್ನು ಮುಗಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು